

ಭಾರತೀಯ ಪುರುಷರ ಕ್ರಿಕೆಟ್ ತಂಡವು ತಮ್ಮ ಕಳೆದ 7 ಪಂದ್ಯಗಳಲ್ಲಿ 0-6 ಅಂತರದ ಫಲಿತಾಂಶ ಪಡೆಯುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. ತಂಡ ಸೋಲದ ಏಕೈಕ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 'ಮೆನ್ ಇನ್ ಬ್ಲೂ' ತಂಡ ಈ ಸೋಲಿನ ಸರಣಿಯಿಂದ ಹೊರಬರಬೇಕಿದೆ. ಭಾರತದ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಪ್ರಕಾರ, ಇದು ಕಷ್ಟವೇನಲ್ಲ.
ಈ ಎರಡು ಸ್ವರೂಪಗಳು ಬಹಳ ಭಿನ್ನವಾಗಿರುವುದರಿಂದ ಮತ್ತು ಏಕದಿನ ಪಂದ್ಯಗಳಿಗಿಂತ ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ಹೆಚ್ಚು ಬಲಿಷ್ಠ ತಂಡವಾಗಿರುವುದರಿಂದ, ಟಿ20 ಸರಣಿಯಲ್ಲಿನ ಇಂಗ್ಲೆಂಡ್ನ ಯಶಸ್ಸು ಏಕದಿನ ಸರಣಿಯಲ್ಲೂ ಮುಂದುವರಿಯುತ್ತದೆ ಎಂದು ಜನರು ಭಾವಿಸಬಾರದು. ಮತ್ತೊಂದು ವಿಭಿನ್ನ ಅಂಶವೆಂದರೆ, ಸರಣಿಯ ಮೊದಲು T20I ಗಳಲ್ಲಿ ಇಂಗ್ಲೆಂಡ್ 2ನೇ ಸ್ಥಾನದಲ್ಲಿದ್ದರೆ, ODI ಗಳಲ್ಲಿ 8ನೇ ಸ್ಥಾನದಲ್ಲಿದೆ.
ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20ಐಗಳಿಗೆ ವಿಶ್ರಾಂತಿ ಪಡೆದಿದ್ದರು. ಏಕದಿನ ಸರಣಿಯಲ್ಲಿ ಭಾರತ ತಂಡವು ಹೆಚ್ಚು ಬಲಶಾಲಿಯಾಗಿರಲಿದೆ; ಏಕೆಂದರೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಲು ಮರಳಿದ್ದಾರೆ ಮತ್ತು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್ ಅವರಂತಹ ಅನುಭವಿ ಬ್ಯಾಟರ್ಗಳು ಕೂಡ ತಂಡಕ್ಕೆ ಮರಳಿದ್ದಾರೆ.
'ಟಿ20 ಸರಣಿಯ ಫಳಿತಾಂಶದ ಯಾವುದೇ ರೀತಿಯ ಪರಿಣಾಮ ಇದರ ಮೇಲೆ ಇರುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಇದು ಭಿನ್ನವಾದ ಸ್ವರೂಪದ ಆಟ ಮತ್ತು ಭಿನ್ನ ಸ್ವರೂಪ, ಭಿನ್ನ ವಾತಾವರಣದಲ್ಲಿ ಏನು ಸಾಧಿಸಬೇಕೆಂಬುದು ತಂಡಕ್ಕೆ ತಿಳಿದಿದೆ' ಎಂದು ಬರ್ಮಿಂಗ್ಹ್ಯಾಮ್ನಲ್ಲಿ ಗಿಲ್ ಸುದ್ದಿಗಾರರಿಗೆ ತಿಳಿಸಿದರು.
ತಂಡಕ್ಕೆ ಎದುರಾಗುವ ಏಕೈಕ ಸಮಸ್ಯೆಯೆಂದರೆ, T20I ಸರಣಿಯ ಭಾಗವಾಗಿದ್ದ ಆಟಗಾರರ ಕಳಪೆ ಅನುಭವಗಳು. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಪ್ರಸಿದ್ಧ್ ಕೃಷ್ಣ, ಅರ್ಶದೀಪ್ ಸಿಂಗ್ ಮತ್ತು ಪ್ರಿನ್ಸ್ ಯಾದವ್ ಸೇರಿದಂತೆ 8 ಆಟಗಾರರಿಗೆ ಆ ಸರಣಿಯು ಅಷ್ಟೇನೂ ಉತ್ತಮವಾಗಿರಲಿಲ್ಲ. ಇವರೆಲ್ಲರೂ ಏಕದಿನ ತಂಡದ ಭಾಗವಾಗಿದ್ದಾರೆ.
ಶ್ರೇಯಸ್ ಅಯ್ಯರ್ ಬ್ಯಾಟ್ಸ್ಮನ್ ಆಗಿ ಉತ್ತಮ ಪ್ರದರ್ಶನ ನೀಡಿದರು. ಆದರೆ, ನಾಯಕನಾಗಿ 6 ಪಂದ್ಯಗಳನ್ನು ಸೋತರು. ಸುಂದರ್ ಮತ್ತು ಪ್ರಸಿದ್ಧ್ರಂತಹ ಇತರರು ಎಲ್ಲ ಪಂದ್ಯಗಳನ್ನು ಆಡಲಿಲ್ಲ. ನಂತರ ಪ್ರಿನ್ಸ್ ಕಳೆದ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ದುಬೆ ಜುಲೈ 2024ರ ನಂತರ ತಮ್ಮ ಮೊದಲ ODI ಪಂದ್ಯವನ್ನು ಆಡಬಹುದು.