ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ಭಾರತದ ಟಿ20 ವಿಶ್ವಕಪ್ ಅಭಿಯಾನದ ಬಗ್ಗೆ ಮತ್ತೊಮ್ಮೆ ಹೊಸ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಭಾರತ ಸೆಮಿಫೈನಲ್ ತಲುಪಲ್ಲ ಎಂದಿದ್ದ ಅವರ ಭವಿಷ್ಯ ವಿಫಲವಾಗಿದ್ದವು. ಸೂಪರ್ 8 ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಈ ಮೂಲಕ ಮೊಹಮ್ಮದ್ ಅಮೀರ್ ಅವರ ಭವಿಷ್ಯವನ್ನು ತಲೆಕೆಳಗಾಗಿಸಿತ್ತು. ಬಳಿಕ ಅವರು ಸಾಕಷ್ಟು ಟ್ರೋಲಿಂಗ್ಗೆ ಗುರಿಯಾಗಿದ್ದರು. ಇದೀಗ ಅಮೀರ್, ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡದ ವಿರುದ್ಧ ಇಂಗ್ಲೆಂಡ್ಗೆ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ.
ಭಾರತದ ಇದುವರೆಗಿನ ಪ್ರದರ್ಶನದ ವಿಶ್ಲೇಷಣೆಯನ್ನು ಹಂಚಿಕೊಂಡ ಅಮೀರ್, ತಂಡವು ಒಂದು ಘಟಕವಾಗಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಅವರನ್ನು ಸೋಲಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮಾರ್ಚ್ 5ರಂದು ಗುರುವಾರ ಮುಖಾಮುಖಿಯಾಗಲಿವೆ. ಈ ಸ್ಥಳವು ಹೆಚ್ಚಿನ ಸ್ಕೋರಿಂಗ್ ಸ್ಪರ್ಧೆಯಾಗುವ ನಿರೀಕ್ಷೆಯಿದೆ. ಇಂಗ್ಲೆಂಡ್ ಎರಡನೇ ಬಾರಿಗೆ ಬ್ಯಾಟ್ ಮಾಡಿದರೆ, ಗೆಲ್ಲುವ ಅವಕಾಶ ಹೆಚ್ಚಿರುತ್ತದೆ ಎಂದು ಅಮೀರ್ ಅಭಿಪ್ರಾಯಪಟ್ಟಿದ್ದಾರೆ.
'ಇದು ಉತ್ತಮ ವಿಕೆಟ್ ಮೇಲಿನ ಪಂದ್ಯ. ರಶೀದ್ ಭಾಯ್ ಹೇಳಿದಂತೆ, ಇಂಗ್ಲೆಂಡ್ ಎರಡನೇ ಬಾರಿಗೆ ಬ್ಯಾಟ್ ಮಾಡಿದರೆ, ಹೆಚ್ಚಿನ ಅವಕಾಶಗಳು ಸಿಗುತ್ತವೆ. ಏಕೆಂದರೆ, ಮುಂಬೈನಲ್ಲಿ ಇದು ಹೆಚ್ಚು ಸ್ಕೋರ್ ಗಳಿಸುವ ಪಂದ್ಯವಾಗಿದೆ' ಎಂದು ಪಾಕಿಸ್ತಾನದ ಮಾಜಿ ವೇಗಿ ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಹೇಳಿದರು.
ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಕೇವಲ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಪ್ರದರ್ಶನ ನೀಡುತ್ತಿರುವುದರಿಂದ, ಭಾರತ ತಂಡ ಇನ್ನೂ ಫೈನಲ್ಗೆ ತಲುಪಲು ಸಿದ್ಧವಾಗಿಲ್ಲ. ಅಭಿಷೇಕ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೂಡ ಕಳವಳಕಾರಿಯಾಗಿದೆ ಎಂದು ಅಮೀರ್ ಭಾವಿಸುತ್ತಾರೆ.
'ಆದರೆ, ನೀವು ಭಾರತದ ಬಗ್ಗೆ ಮಾತನಾಡಿದರೆ, ಅವರ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಪ್ರದರ್ಶನ ನೀಡುತ್ತಿದ್ದಾರೆ. ಆ ಬ್ಯಾಟ್ಸ್ಮನ್ ಸಾಮಾನ್ಯವಾಗಿ ಎಲ್ಲವನ್ನೂ ಸಂಪೂರ್ಣವಾಗಿ ನಿಭಾಯಿಸುತ್ತಾರೆ. ಆದರೆ, ತಂಡದಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಪ್ರದರ್ಶನ ನೀಡಲು ಸಮರ್ಥರಾಗಿದ್ದಾರೆ. ನೀವು ಅವರ ಒಟ್ಟಾರೆ ಬ್ಯಾಟಿಂಗ್ ಅನ್ನು ನೋಡಿದರೆ, ಅದು ಫಾರ್ಮ್ನಲ್ಲಿಲ್ಲ' ಎಂದರು.
'ಇಶಾನ್ ಕಿಶನ್ ನಮ್ಮ ವಿರುದ್ಧ ಮಾತ್ರ ಪ್ರದರ್ಶನ ನೀಡಿದರು. ಅಭಿಷೇಕ್ ಶರ್ಮಾ ಫಾರ್ಮ್ನಲ್ಲಿಲ್ಲ. ತಿಲಕ್ ವರ್ಮಾ ಯಾವುದೇ ಪರಿಣಾಮ ಬೀರಲಿಲ್ಲ. ಸೂರ್ಯಕುಮಾರ್ ಯಾದವ್ ಸೂಪರ್ 8ಕ್ಕೆ ಬಂದಾಗಿನಿಂದ ಏನೂ ಮಾಡಿಲ್ಲ. ಸಂಜು ಮತ್ತು ಬುಮ್ರಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಅವರು ಹೇಳಿದರು.
ಈ ತಂಡ ಪ್ರಾಬಲ್ಯ ಸಾಧಿಸುತ್ತದೆ ಎಂದು ನೀವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಮೀರ್ ತೀರ್ಮಾನಿಸಿದರು.
Advertisement