IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!

ಕಳೆದ ವಾರ, ಐಪಿಎಲ್ 2026ರಲ್ಲಿ ಭಾಗವಹಿಸಲು ಬಯಸುವ ತನ್ನ ಎಲ್ಲ ಕಾಂಟ್ರ್ಯಾಕ್ಟ್ ಆಟಗಾರರು ಕಡ್ಡಾಯ ದೈಹಿಕ ಪ್ರದರ್ಶನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಎಸ್‌ಎಲ್‌ಸಿ ಸ್ಪಷ್ಟಪಡಿಸಿತ್ತು.
Nuwan Thushara to miss IPL 2026 after SLC refuses to give NOC under new fitness policy.
ನುವಾನ್ ತುಷಾರ
Updated on

ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್‍‌ರೈಸರ್ಸ್ ಹೈದರಾಬಾದ್ (SRH) ತಂಡದ ವಿರುದ್ಧ ಸೆಣಸಲಿದೆ. ಪಂದ್ಯಾವಳಿ ಆರಂಭಕ್ಕೆ ಒಂದೇ ದಿನ ಬಾಕಿ ಇರುವಾಗ ಆರ್‌ಸಿಬಿ ಇದೀಗ ವಿದೇಶಿ ವೇಗಿ ನುವಾನ್ ತುಷಾರ ಅವರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಶ್ರೀಲಂಕಾ ಕ್ರಿಕೆಟ್ (SLC) ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರಲ್ಲಿ ಭಾಗವಹಿಸಲು NOC ನಿರಾಕರಿಸಿದೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರು ಕೆಲವು ಫಿಟ್‌ನೆಸ್ ಮಾನದಂಡಗಳನ್ನು ಪೂರೈಸಿದರೆ, ಮಾತ್ರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ ಎನ್ನಲಾಗಿತ್ತು. ತುಷಾರ ಅವರು ಸದ್ಯ ಗಾಯಗೊಂಡಿಲ್ಲವಾದರೂ, ಅವರ ಫಿಟ್‌ನೆಸ್ SLC ಬಯಸುವ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ವರದಿಯಾಗಿದೆ. ಆದ್ದರಿಂದ, IPL ನಲ್ಲಿ ಭಾಗವಹಿಸಲು ಅವರ NOC ಅನ್ನು ತಡೆಹಿಡಿಯಲಾಗಿದೆ.

ಕಳೆದ ವಾರ, ಐಪಿಎಲ್ 2026ರಲ್ಲಿ ಭಾಗವಹಿಸಲು ಬಯಸುವ ತನ್ನ ಎಲ್ಲ ಕಾಂಟ್ರ್ಯಾಕ್ಟ್ ಆಟಗಾರರು ಕಡ್ಡಾಯ ದೈಹಿಕ ಪ್ರದರ್ಶನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಎಸ್‌ಎಲ್‌ಸಿ ಸ್ಪಷ್ಟಪಡಿಸಿತ್ತು. ದುಷ್ಮಂತ ಚಮೀರ, ಪಾತುಮ್ ನಿಸ್ಸಂಕ ಮತ್ತು ಕಮಿಂದು ಮೆಂಡಿಸ್ ಅವರು ಫಿಟ್‌ನೆಸ್ ಅವಶ್ಯಕತೆಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಮಂಡಳಿ ಅವರಿಗೆ ಎನ್‌ಒಸಿ ನೀಡಿದೆ.

ಶ್ರೀಲಂಕಾದ ಸುದ್ದಿವಾಹಿನಿ ವರದಿ ಪ್ರಕಾರ, ತುಷಾರ ಮಂಡಳಿಯು ಬಯಸುವ ಫಿಟ್‌ನೆಸ್ ಮಾನದಂಡಗಳನ್ನು ಇನ್ನೂ ಪೂರೈಸಲು ವಿಫಲರಾಗಿದ್ದಾರೆ. ಆದಾಗ್ಯೂ, ಶ್ರೀಲಂಕಾದ ದಿಗ್ಗಜ ಚಾಮಿಂಡಾ ವಾಸ್, ಎಸ್‌ಎಲ್‌ಸಿ ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವುದಕ್ಕೆ ಅಶಮಾಧಾನ ವ್ಯಕ್ತಪಡಿಸಿದ್ದಾರೆ.

Nuwan Thushara to miss IPL 2026 after SLC refuses to give NOC under new fitness policy.
IPL 2026ರಲ್ಲಿ ಭಾಗವಹಿಸಲು ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ಕಡ್ಡಾಯಗೊಳಿಸಿದ ಶ್ರೀಲಂಕಾ ಕ್ರಿಕೆಟ್

'ಕ್ರಿಕೆಟ್ ವಿಷಯಕ್ಕೆ ಬಂದರೆ ಫಿಟ್ನೆಸ್ ಅತ್ಯಂತ ಮುಖ್ಯ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ನೀವು ಅದನ್ನು ವರ್ಷಗಳ ಕಾಲ ನಿರ್ಲಕ್ಷಿಸಿ ನಂತರ ಐಪಿಎಲ್‌ಗೆ ಸ್ವಲ್ಪ ಮೊದಲು ಇದ್ದಕ್ಕಿದ್ದಂತೆ ಕಟ್ಟುನಿಟ್ಟಾದ ಮಾನದಂಡಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಆಟಗಾರನೊಬ್ಬ ಈಗ ತಪ್ಪಿಸಿಕೊಳ್ಳುವುದು ಶಿಸ್ತಿಗಿಂತ ಕಳಪೆ ಯೋಜನೆಯಂತೆ ಭಾಸವಾಗುತ್ತದೆ' ಎಂದು ವಾಸ್ ಹೇಳಿದರು.

ಐಪಿಎಲ್ 2026ರ ಸೀಸನ್‌ಗೆ ಮುಂಚಿತವಾಗಿ ಜಾಶ್ ಹೇಜಲ್‌ವುಡ್ ಅಧಿಕೃತವಾಗಿ ಆರ್‌ಸಿಬಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಬೆಂಗಳೂರು ಮೂಲದ ಫ್ರಾಂಚೈಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆಯನ್ನು ದೃಢಪಡಿಸಿದೆ. ಹೇಜಲ್‌ವುಡ್ ಸೇರ್ಪಡೆಯು ಆರ್‌ಸಿಬಿಯ ಬೌಲಿಂಗ್ ದಾಳಿಗೆ ಗಮನಾರ್ಹ ಉತ್ತೇಜನ ನೀಡುತ್ತದೆ ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಅನುಭವ ಮತ್ತು ಯಶಸ್ಸು ತಂಡಕ್ಕೆ ನೆರವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com