ಇಂಪ್ಯಾಕ್ಟ್ ಸಬ್ ನಿಯಮ ಕುರಿತು 'ಅಧಿಕೃತ ವಿನಂತಿ ಬಂದಿಲ್ಲ': 2027ಕ್ಕೂ ಮುನ್ನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ; ದೇವಜಿತ್ ಸೈಕಿಯಾ

ಯಾವುದೇ ತಂಡದಿಂದ ಅಂತಹ ಯಾವುದೇ ದೂರು ಬಂದರೆ, ಆ ಸಮಸ್ಯೆಯನ್ನು ಪರಿಹರಿಸಬೇಕಾಗುತ್ತದೆ. ಈ ನಿಯಮದ ಕುರಿತು ಈ ಚರ್ಚೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ.
BCCI Secretary Devajit Saikia
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ
Updated on

ಸ್ವಲ್ಪ ಸಮಯದಿಂದ, ಐಪಿಎಲ್‌ನ ಇಂಪ್ಯಾಕ್ಟ್ ಸಬ್ ನಿಯಮದ ಕುರಿತು ಪರ-ವಿರೋಧದ ಚರ್ಚೆಗಳು ಚಾಲ್ತಿಯಲ್ಲಿವೆ. ಕೆಲವು ಹಾಲಿ ಮತ್ತು ಮಾಜಿ ಆಟಗಾರರು ಇದರ ಬಗ್ಗೆ ಮಾತನಾಡಿದ್ದಾರೆ. ಆದರೆ, 2027ಕ್ಕೂ ಮುನ್ನ ಆ ನಿಯಮದ ಕುರಿತು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ಈ ಬಗ್ಗೆ ಮಾತನಾಡುತ್ತಾ, ಕಳೆದ ಎರಡು ವರ್ಷಗಳಿಂದಲೂ ಚರ್ಚೆಗಳು ನಡೆಯುತ್ತಿವೆ ಎಂದರು.

ಈ ನಿಯಮದ ಪ್ರಕಾರ, ಪಂದ್ಯದ ಯಾವುದೇ ಸಮಯದಲ್ಲಿ, ಪ್ಲೇಯಿಂಗ್ XIಗೆ ಹೊರಗಿನಿಂದ ಒಬ್ಬರನ್ನು ಆಯ್ಕೆ ಮಾಡಬಹುದು. ತಂಡದಲ್ಲಿನ ಒಬ್ಬರನ್ನು ಹೊರಗೆ ಕಳುಹಿಸಬಹುದು. ಇದು ಯಾವುದೇ ತಂಡಕ್ಕೆ ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಬಲ ತುಂಬುತ್ತದೆ. ಈ ನಿಯಮದ ವಿರುದ್ಧ ಕೇಳಿಬಂದಿರುವ ದೊಡ್ಡ ಟೀಕೆಗಳಲ್ಲಿ ಒಂದೆಂದರೆ, ಇದು ಆಲ್‌ರೌಂಡರ್‌ಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಿದೆ. ಇದು ದೀರ್ಘಾವಧಿಯಲ್ಲಿ ಟೀಂ ಇಂಡಿಯಾಕ್ಕೆ ಹಾನಿ ಮಾಡುತ್ತದೆ ಎಂಬ ವಾದವೂ ಇದೆ.

ಆದರೆ ಸೈಕಿಯಾ ಪ್ರಕಾರ, ಐಪಿಎಲ್ ತಂಡಗಳಿಂದ ಯಾವುದೇ ಅಧಿಕೃತ ದೂರು ಬಂದಿಲ್ಲ. ಕೆಲವು ಕಡಿಮೆ ಸ್ಕೋರಿಂಗ್ ಪಂದ್ಯಗಳು ಸಹ ಇವೆ. ಎಲ್ಲ ಅಭಿಮಾನಿಗಳು ಪಂದ್ಯಗಳನ್ನು ಆನಂದಿಸುತ್ತಿದ್ದಾರೆ. ಬೌಲರ್‌ಗಳು ಸಹ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಒಟ್ಟಾರೆ ಸ್ಕೋರ್‌ಕಾರ್ಡ್‌ಗಳನ್ನು ನೋಡಿದರೆ, ಕೆಲವು ತಂಡಗಳು ತುಂಬಾ ಕಡಿಮೆ ಮೊತ್ತವನ್ನು ಗಳಿಸುತ್ತಿವೆ ಮತ್ತು ಕೆಲವು ತಂಡಗಳು 260 ರನ್‌ಗಳನ್ನು ಬೆನ್ನಟ್ಟುತ್ತಿವೆ' ಎಂದು ಅವರು ಹೇಳಿದರು.

BCCI Secretary Devajit Saikia
IPL 2026: ನಿಯಮ ಉಲ್ಲಂಘಿಸುವ ತಂಡಗಳ ವಿರುದ್ಧ ಬಿಸಿಸಿಐ ಕ್ರಮ- ದೇವಜಿತ್ ಸೈಕಿಯಾ

'ಏಕಕಾಲದಲ್ಲಿ ಹಲವು ವಿಭಿನ್ನ ವಿಷಯಗಳು ನಡೆಯುತ್ತಿವೆ ಮತ್ತು ಅವು ಒಟ್ಟಾಗಿ ಒಂದು ಸಂಪೂರ್ಣ ಅಥವಾ ಶ್ರೀಮಂತ ಅನುಭವವನ್ನು ರೂಪಿಸುತ್ತವೆ. ಯಾವುದೇ ತಂಡದಿಂದ ಅಂತಹ ಯಾವುದೇ ದೂರು ಬಂದರೆ, ಆ ಸಮಸ್ಯೆಯನ್ನು ಪರಿಹರಿಸಬೇಕಾಗುತ್ತದೆ. ಈ ಆವೃತ್ತಿಯ ಅಂತ್ಯದ ನಂತರವೇ ಅದು ಸಾಧ್ಯವಾಗುತ್ತದೆ. ನಿಯಮದ ಕುರಿತು ಈ ಚರ್ಚೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಈ ಪಂದ್ಯಾವಳಿ ಮುಗಿದ ನಂತರ ನಾವು ಅದನ್ನು ಪರಿಶೀಲಿಸುತ್ತೇವೆ ಮತ್ತು ಪಂದ್ಯಾವಳಿಯ ಮಧ್ಯದಲ್ಲಿ, ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಸೈಕಿಯಾ ಹೇಳಿದರು.

'ಈ ನಿರ್ದಿಷ್ಟ ಇಂಪ್ಯಾಕ್ಟ್ ಪ್ಲೇಯರ್ ಪ್ರಸ್ತಾಪವನ್ನು ನಾವು ಮರುಪರಿಶೀಲಿಸಬೇಕೆಂದು ಯಾವುದೇ ಅಧಿಕೃತ ವಿನಂತಿಯಿಲ್ಲ. ಮಾಧ್ಯಮಗಳಲ್ಲಿ ನಾನು ಕೆಲವೊಮ್ಮೆ ಅದನ್ನು ಓದುತ್ತೇನೆ. ಆದರೆ ಅದು ತಂಡಗಳಿಂದ ಬಂದರೆ, ನಾವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿಯವರೆಗೆ, ಅಂತಹ ಯಾವುದೇ ಪರಿಸ್ಥಿತಿ ಉದ್ಭವಿಸಿಲ್ಲ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com