

ಮಳೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ತಡವಾಗಿ ಪ್ರಾರಂಭವಾಯಿತು. ಮಳೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 192 ರನ್ ಗಳಿಸಿದ್ದು ಈ ರನ್ ಗುರಿ ಬೆನ್ನಟ್ಟಿದ RCB 194 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ.
ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಪರ ರಘುವಂಶಿ 46 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಒಳಗೊಂಡಂತೆ 71 ರನ್ಗಳೊಂದಿಗೆ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು. ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ ಕೂಡ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ ಅಜೇಯ 49 ರನ್ ಬಾರಿಸಿದರು. ಬೆಂಗಳೂರು ಪರ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್ ಮತ್ತು ರಸಿಕ್ ಸಲಾಂ ತಲಾ ಒಂದು ವಿಕೆಟ್ ಪಡೆದರು.
2.3 ಓವರ್ಗಳಲ್ಲಿ 23 ರನ್ಗಳಿಗೆ ಫಿನ್ ಅಲೆನ್ ರೂಪದಲ್ಲಿ ಕೆಕೆಆರ್ ತಮ್ಮ ಮೊದಲ ವಿಕೆಟ್ ಕಳೆದುಕೊಂಡಿತು. ಅಲೆನ್ 8 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 18 ರನ್ ಗಳಿಸಿ ಔಟಾದರು. ನಂತರ ನಾಯಕ ಅಜಿಂಕ್ಯ ರಹಾನೆ ಔಟಾದಾಗ ತಂಡವು 48 ರನ್ಗಳಲ್ಲಿ ಮತ್ತೊಂದು ಹೊಡೆತವನ್ನು ಅನುಭವಿಸಿತು. ಅವರು 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 19 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಅಂಗ್ಕ್ರಿಷ್ ರಘುವಂಶಿ ಕ್ಯಾಮರೂನ್ ಗ್ರೀನ್ ಅವರೊಂದಿಗೆ 46 ಎಸೆತಗಳಲ್ಲಿ 68 ರನ್ಗಳ ಜೊತೆಯಾಟವಾಡಿದರು. ಈ ಪಾಲುದಾರಿಕೆ ಗ್ರೀನ್ ಅವರ ಔಟಿನೊಂದಿಗೆ ಕೊನೆಗೊಂಡಿತು. ಈ ಹಂತದಲ್ಲಿ ಕೆಕೆಆರ್ 116 ರನ್ ಗಳಿಸಿತ್ತು. ಗ್ರೀನ್ 23 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 32 ರನ್ ಗಳಿಸಿದರು. ನಂತರ ರಘುವಂಶಿ ಮತ್ತು ರಿಂಕು ಸಿಂಗ್ ನಾಲ್ಕನೇ ವಿಕೆಟ್ಗೆ 46 ಎಸೆತಗಳಲ್ಲಿ 76 ರನ್ಗಳ ಪಾಲುದಾರಿಕೆಯನ್ನು ನೀಡುವ ಮೂಲಕ ತಂಡದ ಮೊತ್ತವನ್ನು 190 ರನ್ಗಳ ಗಡಿ ದಾಟಲು ಸಹಾಯ ಮಾಡಿದರು.
ಆರ್ ಸಿಬಿ ಪರ ಜಾಕೋಬ್ ಬೆಥಲ್ 15 ರನ್ ಬಾರಿಸಿ ಔಟಾದರೇ ವಿರಾಟ್ ಕೊಹ್ಲಿ ಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು. ಇನ್ನು ದೇವದತ್ ಪಡಿಕ್ಕಲ್ 39, ರಜತ್ ಪಾಟಿದಾರ್ 11 ರನ್ ಗಳಿಸಿ ಔಟಾದರು. ಕೆಕೆಆರ್ ಪರ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದರೇ ಸುನಿಲ್ ನರೈನ್ 1 ವಿಕೆಟ್ ಪಡೆದರು.
Advertisement