ವೀರಪ್ಪನ್ ವಿರುದ್ಧ ಹೋರಾಡಿದ ಪೊಲೀಸರಿಗೆ ನಿವೇಶನಗಳು?

ಕಾಡುಗಳ್ಳ ವೀರಪ್ಪನ್ ವಿರುದ್ಧದ
ವೀರಪ್ಪನ್ (ಸಂಗ್ರಹ ಚಿತ್ರ)
ವೀರಪ್ಪನ್ (ಸಂಗ್ರಹ ಚಿತ್ರ)

ಬೆಳಗಾವಿ: ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ೧೫ ಜನ ಪೊಲೀಸರಿಗೆ ಮಂಗಳೂರಿನ ಹೊರವಲಯದಲ್ಲಿ ನಿವೇಶನಗಳನ್ನು ಹಂಚುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮೂಡಾ) ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಶೀಘ್ರ ಪರಿಶೀಲಿಸುವಂತೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ೧೫ ಜನ ಪೊಲೀಸರು ದಕ್ಷಣ ಕನ್ನಡದಲ್ಲಿ ಉಚಿತ ನಿವೇಶನದ ಪಲಾನುಭವಿಗಳಾಗಲಿದ್ದಾರೆ ಎಂದು ಮೂಡ ಮಹಾ ನಿರ್ದೇಶಕ ಮೊಹಮದ್ ನಜೀರ್ ತಿಳಿಸಿದ್ದಾರೆ.

ಮಂಗಳೂರು ತಾಲ್ಲೂಕಿನ ಪದವು ಗ್ರಾಮದ ಬಳಿ ಗುರುತಿಸಲಾಗಿರುವ ೧.೫ ಎಕರೆ ಜಾಗದಲ್ಲಿ ೧೯ ನಿವೇಶನಗಳು ಇದ್ದು, ಅವುಗಳಲ್ಲಿ ೧೫ ನಿವೇಶನಗಳನ್ನು ಪೊಲೀಸರಿಗೆ ಉಚಿತವಾಗಿ ಹಂಚಲಾಗುವುದು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಬಹುಮಾನಗಳನ್ನು ಈ ಹಿಂದೆಯೆ ಸರ್ಕಾರ ಘೋಷಿಸಿದ್ದರು ಕೂಡ, ವೀರಪ್ಪನ್ ಹತನಾದ ಕಾರ್ಯಾಚರಣೆಯಲ್ಲಿ ಭಾಗಿಯಾಗದ ಪೊಲೀಸರು ಈ ಬಹುಮಾನಗಳಿಂದ ವಂಚಿತರಾಗಿದ್ದರು.

ಜಿಲ್ಲೆಯ ಕೆಲವು ಪೊಲೀಸರು ತಾವೂ ಕೂಡ ಸರ್ಕಾರ ಘೋಷಿಸಿದ ಬಹುಮಾನಕ್ಕೆ ಅರ್ಹರು ಎಂದು ಸಾಬೀತು ಪಡಿಸಲು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಸರ್ಕಾರದ ವಾದವನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು.

ಆದರೆ ಈಗ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ನಿವೇಶನಗಳನ್ನು ಹಂಚುವ ಸರ್ಕಾರದ ಚಿಂತನೆ, ಹಲವು ಪೊಲೀಸರಲ್ಲಿ ಭರವಸೆ ಹುಟ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com