ಆರೋಪಿಗೆ ಮರ್ಮಾಘಾತ

ತಾಯಿಯೊಂದಿಗೆ ಬಟ್ಟೆ ತೊಳೆಯುತ್ತಿದ್ದ 10 ವರ್ಷದ ಬಾಲಕಿಗೆ ಚಾಕಲೇಟ್ ಕೊಡಿಸುವ ನೆಪದಲ್ಲಿ...
ಆರೋಪಿಗೆ ಮರ್ಮಾಘಾತ
Updated on

ಕೃಷ್ಣರಾಜಪುರ: ತಾಯಿಯೊಂದಿಗೆ ಬಟ್ಟೆ ತೊಳೆಯುತ್ತಿದ್ದ 10 ವರ್ಷದ ಬಾಲಕಿಗೆ ಚಾಕಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಮಾರ್ಮಾಂಗವನ್ನು ತೋರಿಸಿದ ದುಷ್ಕರ್ಮಿಯನ್ನು ಹಿಡಿದ ಸಾರ್ವಜನಿಕರು, ಆತನ ಬಟ್ಟೆ ಬಿಚ್ಚಿ ನಗ್ನಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ, ಹಿಗ್ಗಾಮಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಾಡುಗುಡಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶ ಮೂಲದ ಅಶೋಕ್(30) ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗೂಸಾ ತಿಂದವ. ಆರೋಪಿ ಪಲಮನೇರು ಜಿಲ್ಲೆಯವನು ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಅಪರಿಚಿತನಂತೆ ಆಗಾಗ ಕಾಣಿಸಿಕೊಲ್ಳುತ್ತಿದ್ದ ಆರೋಪಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗುತ್ತಿದ್ದ.

ಭಾನುವಾರ ಬೆಳಗ್ಗೆ ಕಾಡುಗುಡಿ ಸಮೀಪದ ಬೆಳೆತೂರಿನ ಅಪಾರ್ಟ್‌ಮೆಂಟ್‌ವೊಂದರ ಬಳಿ ಮಹಿಳೆಯೊಬ್ಬರು ಮಗಳೊಂದಿಗೆ ಬಟ್ಟಿ ತೊಳೆಯುತ್ತಿದ್ದರು. ಸ್ವಲ್ಪ ಸಮಯದ ನಂತರ ಕೆಲಸದ ನಿಮಿತ್ತ ಸಮೀಪದಲ್ಲಿದ್ದ ಮನೆಗೆ ತೆರಳಿದ್ದಾರೆ.

ಅಲ್ಲೆ ಹೊಂಚು ಹಾಕಿದ್ದ ಆರೋಪಿ ಅಶೋಕ್, ಬಾಲಕಿಯನ್ನು ಚಾಕಲೇಟ್ ಕೊಡಿಸುವ ಆಮಿಷವೊಡ್ಡಿ ಸಮೀಪದ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ತನ್ನ ಬಟ್ಟೆ ಬಿಚ್ಚಿ ಮರ್ಮಾಂಗವನ್ನು ಬಾಲಕಿಗೆ ತೋರಿಸಿದ್ದಾನೆ. ಬಾಲಕಿ ಭಯಗೊಂಡು ಕಿರುಚಾಡಿ ಓಡಿ ಬಂದಿದ್ದಾಳೆ.

ಇದನ್ನು ಕಂಡ ಅಲ್ಲಿನ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಬಟ್ಟೆ ಬಿಚ್ಚಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಇದೇ ರೀತಿ ಹಲವು ಮಹಿಳೆಯರು ಮತ್ತು ಬಾಲಕಿಯರಿಗೆ ತನ್ನಮಾರ್ಮಾಂಗ ತೋರಿಸಿ ವಿಲಕ್ಷಣ ಸುಖ ಅನುಭವಿಸುವ ಕಾಮುಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡುಗುಡಿ ಪೊಲೀಸರು ತನಿಕೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com