ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
ಬೆಂಗಳೂರು: ಮಾಧ್ಯಮ ಅಕಾಡೆಮಿಯು ಜೀವಮಾನ ಸಾಧನೆಗಾಗಿ ನೀಡುವ 2014ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಎಂ.ಎಸ್. ಪ್ರಭಾಕರ್ ಅವರಿಗೆ ನೀಡಿ
ಗೌರವಿಸಲಾಯಿತು.
ಗುರುವಾರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪರವಾಗಿ ಟಿ.ಬಿ.ಜಯಚಂದ್ರ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವರಾದ ಎಚ್.
ಆಂಜನೇಯ, ಆರ್.ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ಇದ್ದರು. ಕೋಟಗಾನಹಳ್ಳಿ ರಾಮಯ್ಯ, ಎಂ.ಕೆ.ಭಾಸ್ಕರರಾವ್, ಎಂ.ನಾಗರಾಜ, ಕೆಬಿ ರಾಮಪ್ಪ, ಬಿ ಹೊನ್ನಪ್ಪ, ಭಾವಿಕೇರಿ, ಗಾಯತ್ರಿ ನಿವಾಸ್, ಲೀಲಾವತಿ, ಲಿಂಗೇನಹಳ್ಳಿ ಸುರೇಶ್ಚಂದ್ರ, ಇಫ್ತೀಕರ್ ಅಹಮದ್ ಶರೀಫ್, ವೀರೇಂದ್ರ ಶೀಲವಂತ, ರಿಜ್ವಾನ್ ಉಲ್ಲಾಖಾನ್, ಬಿ.ಎಸ್.ಪ್ರಭು ರಾಜನ್, ದೇವೇಂದ್ರಪ್ಪ ಎಚ್ ಕಪನೂರಕರ್, ಬಿ.ವಿ.ಗೋಪಿನಾಥ್, ರೋನ್ಸ್ ಬಂಟ್ವಾಳ್, ಗಂಧರ್ವ ಸೇನಾ, ಶಿವಕುಮಾರ್ ಅಡಿವೆಪ್ಪ ಭೋಜಶೆಟ್ಟರ್, ಶಿವಾನಂದ ತಗಡೂರು, ವಿ.ನಂಜುಂಡಪ್ಪ, ಎಚ್.
ಟಿ.ಅನಿಲ್, ಬಸವರಾಜ ಹೊಂಗಲ್, ಸಿ.ಎನ್. ರಾಜು, ನಾಗಲಕ್ಷ್ಮಿಬಾಯಿ, ವಿನಾಯಕ ಗಂಗೊಳ್ಳಿ, ಎನ್.ರವಿಕುಮಾರ್, ವಿಲಾಸ ಮೇಲಗಿರಿ, ಮಂಜುನಾಥ ಎಂ.ಅದ್ದೆ, ಲೈಕ್ ಎಖಾನ್ ರಕ್ಷಾ ಕಟ್ಟೆಬೆಳಗುಳಿ, ಎಸ್.ಲಕ್ಷ್ಮೀನಾರಾಯಣ, ಸಾಹುಕಾರ್ ಚಂದ್ರಶೇಖರ ರಾವ್, ಬಂಗ್ಲೆ ಮಲ್ಲಿಕಾರ್ಜುನ, ಪತ್ರಿಕಾ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಮತ್ತು ಎಸ್.ನಾಗೇಂದ್ರ (ನೇತ್ರರಾಜು) ಅವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ