ಮಹಿಳೆಯ ಕೊಲೆ: ಕರವೇ ಮುಖಂಡನ ಬಂಧನ

ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆ, `ಮದುವೆಯಾಗು' ಎಂದು ಒತ್ತಾಯಿಸಿದ್ದಕ್ಕೆ ಕುಪಿತಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡನೊಬ್ಬ ಆಕೆಯನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ನಿಗೂಢ ಕೊಲೆ ಪ್ರಕರಣವನ್ನು ತಲಘಟ್ಟಪುರ ಪೊಲೀಸರು ಭೇದಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆ, `ಮದುವೆಯಾಗು' ಎಂದು ಒತ್ತಾಯಿಸಿದ್ದಕ್ಕೆ ಕುಪಿತಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡನೊಬ್ಬ ಆಕೆಯನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ನಿಗೂಢ ಕೊಲೆ ಪ್ರಕರಣವನ್ನು ತಲಘಟ್ಟಪುರ ಪೊಲೀಸರು ಭೇದಿಸಿದ್ದಾರೆ.

ಕರವೇ ಮುಖಂಡ, ಜೆಪಿ ನಗರ 6ನೇ ಹಂತ ನಿವಾಸಿ ಯೋಗೇಶ್ ಸಾಗರ್(38), ಕೊಲೆಗೆ ಸಹಕರಿಸಿದ ಯೋಗೇಶ್ ಸಂಬಂಧಿ ಗುರುಲಿಂಗ (40)ಬಂಧಿತರು. ತಲಘಟ್ಟಪುರ ಸಮೀಪದ ತಿಪ್ಪಸಂದ್ರದಲ್ಲಿ ಶಿಲ್ಪಾ (35) ಎಂಬಾಕೆಯನ್ನು ಯೋಗೇಶ್ ಕೊಲೆ ಮಾಡಿ, ಗುರುಲಿಂಗನ ನೆರವಿನೊಂದಿಗೆ ಶವವನ್ನು ಕಾರಿನಲ್ಲಿ ಹಾಕಿಕೊಂಡು ತುಮಕೂರು ಜಿಲ್ಲೆ ಕೊಂಡ್ಲಿ ಕ್ರಾಸ್ ಸಮೀಪದ ಗಣಿಗಾರಿಕೆ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಯೋಗೇಶ್, ಶಿಲ್ಪಾ ಮನೆಯಲ್ಲಿ ವೇಶ್ಯಾವಾಟಿಕೆಯನ್ನೂ ನಡೆಸುತ್ತಿದ್ದ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಶಿಲ್ಪಾ ನಾಪತ್ತೆಯಾಗಿರುವ ಬಗ್ಗೆ ಸಹೋದರಿ ಕನಕಮ್ಮ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com