ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ನಾಗರಿಕ ಸೇವೆಗೆ ಸಿದ್ಧವಾಗಿದೆ.
ಮೇ 1ರಂದು ಮೆಟ್ರೋ 3ಬಿ ಮಾರ್ಗಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶದಿಂದ ಜಾಲಹಳ್ಳಿ, ದಾಸರಹಳ್ಳಿ ಮಾರ್ಗವಾಗಿ ನಾಗಸಂದ್ರ ತಲುಪಲಿದೆ. ಇದರ ಒಟ್ಟು ದೂರ 2.5 ಕಿ.ಮೀ. ಆಗಿದೆ. ಅಂದು ಬೆಳಗ್ಗೆ 9.45ಕ್ಕೆ ಈ ಮಾರ್ಗಕ್ಕೆ ಚಾಲನೆ ದೊರೆಯಲಿದ್ದು, ಸಿಎಂ ಸಿದ್ದರಾಮಯ್ಯ ಭಾಗವ ಹಿಸಲಿದ್ದಾರೆ.
Advertisement