ನೇತ್ರಾವತಿ ಹಿನ್ನೀರಿನಲ್ಲಿ ಇಸ್ಕಾನ್ ಸದಸ್ಯನ ಶವ ಪತ್ತೆ, ಕೊಲೆ ಶಂಕೆ

ಮಂಗಳೂರು ಇಸ್ಕಾನ್ ಸದಸ್ಯನ ಶವ ಉಳ್ಳಾಲ ಬಳಿಯ ಕುದ್ರುವಿನ ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ...
ಇಸ್ಕಾನ್ ಮಂಗಳೂರು
ಇಸ್ಕಾನ್ ಮಂಗಳೂರು

ಮಂಗಳೂರು: ಮಂಗಳೂರು ಇಸ್ಕಾನ್ ಸದಸ್ಯನ ಶವ ಉಳ್ಳಾಲ ಬಳಿಯ ಕುದ್ರುವಿನ ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ 28 ವರ್ಷದ ರವಿಕುಮಾರ್ ಎಂಬಾತನ ಶವ ಇಂದು ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಕುತ್ತಿಗೆಗೆ ಕಲ್ಲು ಬಿಗಿದ ಸ್ಥಿತಿಯಲ್ಲಿ ರವಿಕುಮಾರ್ ಶವ ಪತ್ತೆಯಾಗಿದ್ದು, ಈ ಸಂಬಂಧ ಮಂಗಳೂರು ಇಸ್ಕಾನ್ ಮುಖ್ಯಸ್ಥ ತಾರುಣ್ಯ ಸಾಗರ ದಾಸ್ ವಿರುದ್ಧ ರವಿಕುಮಾರ್ ಸಹೋದರ ನರೇಂದ್ರ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ 2 ದಿನಗಳಿಂದ ರವಿಕುಮಾರ್ ನಾಪತ್ತೆಯಾಗಿದ್ದ ಕುರಿತು ನರೇಂದ್ರ ಅವರು ತಾರುಣ್ಯ ಸಾಗರ ದಾಸ್ ಅವರನ್ನು ಪ್ರಶ್ನಿಸಿದಾಗ, ಅವರು ಸರಿಯಾಗಿ ಉತ್ತರಿಸದ ಕಾರಣ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ನರೇಂದ್ರ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com