ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ನಲ್ಲಿ ಟಿಕೆಟ್ ಸಿಗದ ಕಾರಣ ಪಕ್ಷ ತೊರೆಯಲಿರುವ ವಿಜಯಲಕ್ಷ್ಮೀ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತಗೊಂಡಿದೆ.
ಜೆಡಿಎಸ್ ನಿಂದ ಹೊರಬರಲಿರುವ ವಿಜಯಲಕ್ಷ್ಮಿ ಬಿಜೆಪಿಯಿಂದ ಪಾಲಿಕೆ ಚುನಾವಣೆಗೆ ಸ್ವರ್ಧಿಸುವುದನ್ನು ಖಚಿತಪಡಿಸಿದ ಬಿಜೆಪಿ ನಗರಾಧ್ಯಕ್ಷ ಸುಬ್ಬನರಸಿಂಹ, ವಿಜಯಲಕ್ಷ್ಮಿಸಿಂಗ್ ಕಾವೇರಿಪುರ ವಾರ್ಡ್ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂಡು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಲಿರುವ ವಿಜಯಲಕ್ಷ್ಮಿಸಿಂಗ್ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತಗೊಂಡಿದೆ.
Advertisement