ರಕ್ತಚಂದನ ಮಾರಾಟ: ಮೂವರ ಸೆರೆ

ರಕ್ತ ಚಂದನ ಮರದತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು ಸುಮಾರು ರು.9 ಲಕ್ಷ ಮೌಲ್ಯದ 210 ಕೆಜಿ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ರಕ್ತ ಚಂದನ ಮರದತುಂಡುಗಳನ್ನು ಮಾರಾಟ  ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು ಸುಮಾರು ರು.9 ಲಕ್ಷ ಮೌಲ್ಯದ 210 ಕೆಜಿ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ನಿವಾಸಿ ನವೀನ್, ಬೂದಿಗೇರೆ ಕ್ರಾಸ್‍ನ ತಬ್ರೇಜ್ಅಹ್ಮದ್ ಹಾಗೂ ಚಿಕ್ಕಮಗಳೂರಿನ ಮಹಮ್ಮದ್ ಫರೂಕ್ ಬಂಧಿತರು. ಗ್ರಾಹಕರ ಸೋಗಿನಲ್ಲಿ ಪೊಲೀಸರ ತಂಡ ಆರೋಪಿಗಳನ್ನು ಸಂಪರ್ಕಿಸಿದ್ದರು.

ಸುಧಾಮನಗರದಲ್ಲಿ ಪೊಲೀಸರು ಕಾಯುತ್ತಾ ನಿಂತಾಗ ಆರೋಪಿಗಳು ಮರದ ತುಂಡುಗಳನ್ನು ಕಾರಿನಲ್ಲಿ ತಂದಿದ್ದರು. ಡಿಕ್ಕಿಯಲ್ಲಿದ್ದ ಮರದ ತುಂಡುಗಳು ರಕ್ತಚಂದನ ಎನ್ನು ವುದು ಗೊತ್ತಾಗುತ್ತಿದ್ದಂತೆ ಮೂವರನ್ನು ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com