ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿ ಸಂತ್ರಸ್ತರಿಗೆ ನೆರವಾಗುತ್ತಿರುವ ಬೆಂಗಳೂರಿನ ಯುವಕ

ರಾಮ್ ಕಶ್ಯಪ್ ಸಂತ್ರಸ್ತರ ನೆರವಿಗಾಗಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾನೆ. ಚೆನ್ನೈ ಸಂತ್ರಸ್ತರಿಗೆ ನೀಡಲು ಬೆಂಗಳೂರಿನ...
ರಾಮ್ ಕಶ್ಯಪ್ (ಕೃಪೆ:  ಫೇಸ್ ಬುಕ್ )
ರಾಮ್ ಕಶ್ಯಪ್ (ಕೃಪೆ: ಫೇಸ್ ಬುಕ್ )
ಬೆಂಗಳೂರು: ಜಲಪ್ರಳಯದಿಂದ ನಲುಗುತ್ತಿರುವ ಚೆನ್ನೈಗೆ ದೇಶದಾದ್ಯಂತದಿಂದ ನೆರವು ಹರಿದು ಬರುತ್ತಿದ್ದರೆ ಬೆಂಗಳೂರಿನ ರಾಮ್ ಕಶ್ಯಪ್ ಎಂಬ ಯುವಕ ತನ್ನದೇ ಆದ ರೀತಿಯಲ್ಲಿ ಚೆನ್ನೈ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾನೆ.
ರಾಮ್ ಕಶ್ಯಪ್ ಸಂತ್ರಸ್ತರ ನೆರವಿಗಾಗಿ ಬೆಂಗಳೂರಿನಿಂದ  ಚೆನ್ನೈಗೆ ಪ್ರಯಾಣಿಸಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾನೆ. ಚೆನ್ನೈ ಸಂತ್ರಸ್ತರಿಗೆ ನೀಡಲು ಬೆಂಗಳೂರಿನ ಜನರು ನೀಡಿದ ಆಹಾರ ವಸ್ತುಗಳು, ಪ್ಲೇಟ್, ರೈನ್‌ಕೋಟ್ ಮೊದಲಾದ ವಸ್ತುಗಳನ್ನು ತೆಗೆದುಕೊಂಡು ಈತ ಬೆಂಗಳೂರಿನಿಂದ ಚೆನ್ನೈಗೆ ಡ್ರೈವ್ ಮಾಡುತ್ತಾನೆ. ಹಾಗೆ ತೆಗೆದುಕೊಂಡು ಹೋದ ವಸ್ತುಗಳನ್ನು ಸಂತ್ರಸ್ತರಿಗೆ ವಿತರಿಸಿ ಮತ್ತೆ ಬೆಂಗಳೂರಿಗೆ ಬರುತ್ತಾನೆ.
ಹೀಗೆ ಬೆಂಗಳೂರು ಟು ಚೆನ್ನೈಗೆ ಡ್ರೈವ್ ಮಾಡುವುದು ಕಷ್ಟದ ಕೆಲಸ. ಆದರೆ ರಾಮ್ ಕಶ್ಯಪ್ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಗೆಳೆಯರೊಂದಿಗೆ ಸೇರಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾನೆ. 
ತನ್ನ ಚಟುವಟಿಕೆಗಳ ಬಗ್ಗೆ ರಾಮ್ ಕಶ್ಯಪ್ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಮಾಡುತ್ತಾ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ.
ಬೆಂಗಳೂರಿನ ನಿವಾಸಿಗಳು ಚೆನ್ನೈ ಸಂತ್ರಸ್ತರಿಗೆ ಸಹಾಯ ಮಾಡಲು ಇಚ್ಛಿಸುತ್ತಿದ್ದರೆ  ರಾಮ್ ಕಶ್ಯಪ್ ಅವರ ಫೇಸ್ ಬುಕ್ ಅಪ್‌ಡೇಟ್ ಫಾಲೋ ಮಾಡಬಹುದು ಇಲ್ಲವೇ ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com