ರಾಮ್ ಕಶ್ಯಪ್ ಸಂತ್ರಸ್ತರ ನೆರವಿಗಾಗಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾನೆ. ಚೆನ್ನೈ ಸಂತ್ರಸ್ತರಿಗೆ ನೀಡಲು ಬೆಂಗಳೂರಿನ ಜನರು ನೀಡಿದ ಆಹಾರ ವಸ್ತುಗಳು, ಪ್ಲೇಟ್, ರೈನ್ಕೋಟ್ ಮೊದಲಾದ ವಸ್ತುಗಳನ್ನು ತೆಗೆದುಕೊಂಡು ಈತ ಬೆಂಗಳೂರಿನಿಂದ ಚೆನ್ನೈಗೆ ಡ್ರೈವ್ ಮಾಡುತ್ತಾನೆ. ಹಾಗೆ ತೆಗೆದುಕೊಂಡು ಹೋದ ವಸ್ತುಗಳನ್ನು ಸಂತ್ರಸ್ತರಿಗೆ ವಿತರಿಸಿ ಮತ್ತೆ ಬೆಂಗಳೂರಿಗೆ ಬರುತ್ತಾನೆ.