ಪ್ರಣವಾನಂದ ಸ್ವಾಮೀಜಿ ಉಚ್ಚಾಟನೆ

ಸಾರ್ವಜನಿಕ ಹಣ ದುರುಪಯೋಗ, ಕೋಮುಪ್ರಚೋದಿತ ಭಾಷಣ, ಸ್ವಜನ ಪಕ್ಷಪಾತ ಮಾಡಿದ ಆರೋಪ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ಪ್ರಣವಾನಂದ...
ಪ್ರಣವಾನಂದ ಸ್ವಾಮಿ (ಸಂಗ್ರಹ ಚಿತ್ರ)
ಪ್ರಣವಾನಂದ ಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ಸಾರ್ವಜನಿಕ ಹಣ ದುರುಪಯೋಗ, ಕೋಮುಪ್ರಚೋದಿತ ಭಾಷಣ, ಸ್ವಜನ ಪಕ್ಷಪಾತ ಮಾಡಿದ ಆರೋಪ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕ ಅಧ್ಯಕ್ಷ  ಸ್ಥಾನದಿಂದ ಪ್ರಣವಾನಂದ ಸ್ವಾಮೀಜಿಯನ್ನು ಉಚ್ಛಾಟಿಸಲಾಗಿದೆ ಎಂದು ಹಿಂದೂ ಮಹಾ ಸಭಾದ ರಾಷ್ಟ್ರೀಯ ವಕ್ತಾರ ಎಂ. ವಾಸುದೇವ ಎರಾವ್ ಕಶ್ಯಪ್ ತಿಳಿಸಿದ್ದಾರೆ.

2014ರ ನ.19 ರಂದು ಪ್ರಣವಾನಂದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಅವರು ಸ್ವಯಂ ಘೋಷಿತ ಸ್ವಾಮೀಜಿ. ಸಂಘವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ. ಅವರಿಗೆ  ಉತ್ತಮ ಚರಿತ್ರೆ ಇಲ್ಲ. ಹಲವು ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಸಂಘದಿಂದ ಉಚ್ಛಾಟಿಸಲಾಗಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com