ಬೆಂಗಳೂರು: ವಸತಿಗೃಹದ ಮಹಡಿಯ ಬಾಲ್ಕನಿಯಲ್ಲಿ ನಿಂತು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿ ದ್ದ ವ್ಯಕ್ತಿಗೆ ವಿದ್ಯುತ್ ತಂತಿ ತಗುಲಿ, ಆತ ಮೃತಪಟ್ಟಿರುವ ಘಟನೆ ಭಾನುವಾರ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡಿನ ಸೇಲಂ ಮೂಲದ ಗೌರಿಶಂಕರ್ (25) ಮೃತರು. ಯಾವು ದೋ ಕೆಲಸದ ನಿಮಿತ್ತ ಶನಿವಾರ ನಗರಕ್ಕೆ ಬಂದಿದ್ದ ಅವರು, ಮಾರುತಿನಗರದ ಸಿ ಪರ್ಲ್ ವಸತಿಗೃಹದಲ್ಲಿ ತಂಗಿದ್ದರು. ರಸ್ತೆ ಪಕ್ಕದಲ್ಲಿರುವ ವಸತಿ ಗೃಹದ ಕಟ್ಟಡದ ಸಮೀಪ ಟ್ರಾನ್ಸ್ ಫಾರಂ ಇದೆ. ಹೀಗಾಗಿ ಅದರ ವಿದ್ಯುತ್ ತಂತಿಗಳು ಮಹಡಿಗೆ ಬಹಳ ಹತ್ತಿರದಲ್ಲಿ ಹಾದು ಹೋಗಿವೆ. ಗೌರಿಶಂಕರ್ ಭಾನುವಾರ ಮಧ್ಯಾಹ್ನ 1.30ರ ಸುಮಾರಿನಲ್ಲಿ ಮಹಡಿಯ ಬಾಲ್ಕನಿಯಲ್ಲಿ ನಿಂತು ಮೊಬೈಲ್ ಫೋನ್ನಲ್ಲಿ ಯಾರೊಂದಿಗೋ ಮಾತಿನಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಗೌರಿಶಂಕರ್ ಅವರ ಕೈ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿದೆ.
ಇದರಿಂದ ಕುಸಿದು ಬಿದ್ದು ಕಿರುಚಿದ್ದಾರೆ. ತಕ್ಷಣ ವಸತಿಗೃಹದಲ್ಲಿದ್ದವರು ಹಾಗೂ ಸಿಬ್ಬಂದಿ ಗೌರಿಶಂಕರ್ ನೆರವಿಗೆ ಧಾವಿಸಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆಗೆ ಗೌರಿಶಂಕರ್ ಮೃತಪಟ್ಟಿದ್ದರು. ಮಹಡಿ ಸಮೀಪವೇ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಪ್ಲಾಸ್ಟಿಕ್ ಸುತ್ತಲಾಗಿದೆ. ಆದರೂ ಗೌರಿಶಂಕರ್ಗೆ ವಿದ್ಯುತ್ ತಗುಲಿದೆ.
Advertisement