ಹಣ ವಸೂಲಿ: ನಾಲ್ವರು ಮಂಗಳಮುಖಿ ಸೆರೆ

ದಾರಿಹೋಕರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಂಗಳಮುಖಿ ಯರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ...
ಹಣ ವಸೂಲಿ: ನಾಲ್ವರು ಮಂಗಳಮುಖಿ ಸೆರೆ

ಬೆಂಗಳೂರು: ದಾರಿಹೋಕರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಂಗಳಮುಖಿಯರನ್ನು ವಿಜಯನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಪೂಜಿನಗರ ನಿವಾಸಿಗಳಾದ ಪ್ರಿಯಾ, ಅವಿಷ್ಕ, ಸ್ನೇಹ, ಭುವನ ಬಂಧಿತರು. ಆರೋಪಿಗಳು ಹಣ ಇರುವ ಅಥವಾ ಶ್ರೀಮಂತ ವ್ಯಕ್ತಿಗಳನ್ನು ಕಂಡ ತಕ್ಷಣ ಅವರ ಬಳಿ ಹೋಗಿ ವಿಚಿತ್ರವಾಗಿ ವರ್ತಿಸುತ್ತಿದ್ದರು. ಬಲವಂತವಾಗಿ ಅವರ ಕೈಗಳನ್ನು ಇಬ್ಬರು ಹಿಡಿದು ಉಳಿದಿಬ್ಬರು ತಾವೇ ಶರ್ಟ್ ಮತ್ತು ಪ್ಯಾಂಟ್ ಜೇಬಿಗೆ ಕೈ ಹಾಕಿ ಇರುವ ಹಣ, ಆಭರಣ ದೋಚುತ್ತಿದ್ದರು.

ಜನವರಿ 24ರಂದು ಬಸವರಾಜು ಎಂಬುವರನ್ನು ಅಡ್ಡಗಟ್ಟಿ ಹಣ ನೀಡುವಂತೆ ಕೇಳಿದ್ದಾರೆ. ಚಿಲ್ಲರೆ ಇಲ್ಲ ಎಂದು ಅವರು ನಿರಾಕರಿಸಿದ ಕಾರಣ, ಚಿಲ್ಲರೆ ಕೊಡುವ ನೆಪದಲ್ಲಿ ರು.50 ಪಡೆದು ನಂತರ ಬಲವಂತವಾಗಿ ಜೇಬಿನಲ್ಲಿದ್ದ ಸಾವಿರಾರು ರುಪಾಯಿ ಹಣ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವಿಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ನಗರದ ಹಲವೆಡೆ ಈ ರೀತಿ ಬಲವಂತವಾಗಿ ಸುಲಿಗೆ ಮಾಡಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com