ಮಂಡ್ಯ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವೇದಿಕೆಯಿಂದ ಕೆಳಗೆ ಇಳಿಯುವ ಮುನ್ನ ಎಡವಿದ ಕಾರಣಕ್ಕಾಗಿ ಎಡಗಾಲಿಗೆ ಬಾವು ಬಂದ ಘಟನೆ ಶುಕ್ರವಾರ ಜರುಗಿತು.
ನಗರದ ಸರ್ ಎಂವಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಭಾಷಣ ಮುಗಿಸಿ ತುರ್ತಾಗಿ ಮೈಸೂರಿಗೆ ತೆರಳುವ ಅನಿವಾರ್ಯತೆ ಹೇಳಿಕೊಂಡು ವೇದಿಕೆಯಿಂದ ನಿರ್ಗಮಿಸಿದರು.
ಸಚಿವ ಅಂಬರೀಷ್ ಸೇರಿದಂತೆ ಇತರೆ ಗಣ್ಯರು ಪ್ರಮೋದಾದೇವಿಯವರನ್ನು ವೇದಿಕೆಯಿಂದ ಬೀಳ್ಕೊಟ್ಟರು. ವೇದಿಕೆಯಿಂದ ಇಳಿಯುವ ಮುನ್ನ ಕೊನೆ ಮೆಟ್ಟಿಲಲ್ಲಿ ಆಯತಪ್ಪಿ ಕೆಳಗೆ ಬಿದ್ದರು. ಎಡಗಾಲಿನ ಪಾದಕ್ಕೆ ಸ್ವಲ್ಪ ಒಳ ಏಟು ಆಗಿ ಬಾವು ಬಂದಿತು. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.
Advertisement