ಬೆಂಗಳೂರು: ಕಟ್ಟಡ ಕೆಡವಲು ಅನುಮತಿಗಾಗಿ ರು.50 ಸಾವಿರ ಲಂಚ ಪಡೆದ ಬಿಬಿಎಂಪಿ ವಿಜಯನಗರ ಉಪ ವಿಭಾಗದ ಸಹಾಯಕ ಅಭಿಯಂತರ ನಾಗಭೂಷಣ್ ಎಂಬುವರು ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ವಿಜಯನಗರದಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ಕೆಡವಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅನುಮತಿಗಾಗಿ ನಾಗಭೂಷಣ್ ಲಂಚ ಕೇಳಿದ್ದರು. ಲಂಚ ನೀಡಲಿಚ್ಛಿಸದ ಕಟ್ಟಡದ ಮಾಲೀಕ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶನಿವಾರ ಕಟ್ಟಡ ಮಾಲೀಕರಿದಂ ಲಂಚ ಪಡೆಯುತ್ತಿದ್ದ ನಾಗಭೂಷಣ್ ಅವರನ್ನು ಬಂಧಿಸಿದ್ದಾರೆ.
Advertisement