ಬೈಕ್ ಗುದ್ದಿಸಿ ಏಳು ಲಕ್ಷ ದೋಚಿ ಪರಾರಿ

ಖಾಸಗಿ ಕಂಪನಿ ಉದ್ಯೋಗಿಯ ಬೈಕ್ ಗೆ ಮತ್ತೊಂದು ಬೈಕ್ ಗುದ್ದಿದ ದುಷ್ಕರ್ಮಿಗಳಿಬ್ಬರು 7 ಲಕ್ಷರೂಪಾಯಿಗಳನ್ನು ದೋಚಿದ್ದಾರೆ.
ದರೋಡೆ(ಸಾಂದರ್ಭಿಕ ಚಿತ್ರ)
ದರೋಡೆ(ಸಾಂದರ್ಭಿಕ ಚಿತ್ರ)

ಬೆಂಗಳೂರು: ವಿವಿಧ ಮಳಿಗೆ ಹಾಗೂ ಶೋರೂಂಗಳಿಂದ ಹಣ ಸಂಗ್ರಹಿಸುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯ ಬೈಕ್ ಗೆ ಮತ್ತೊಂದು ಬೈಕ್ ಗುದ್ದಿದ ದುಷ್ಕರ್ಮಿಗಳಿಬ್ಬರು 7 ಲಕ್ಷರೂಪಾಯಿಗಳನ್ನು ದೋಚಿರುವ ಘಟನೆ ಯಲಹಂಕದ ಸಮೀಪದ ಚಿಕ್ಕಬೊಮ್ಮಸಂದ್ರದಲ್ಲಿ ನಡೆದಿದೆ.

ದಾಸರಹಳ್ಳಿ ನಿವಾಸಿ ಶ್ರೀಕಾಂತ ಹಣ ಕಳೆದುಕೊಂಡವರು. ಮಳಿಗೆಗಳು ಹಾಗೂ ಶೋರೂಂಗಳಿಂದ ಹಣ ಸಂಗ್ರಹಿಸಿ ಅದನ್ನು ಬ್ಯಾಂಕ್ ಗೆ ಡೆಪಾಸಿಟ್ ಮಾಡುತ್ತಿದ್ದರು. 7 ಲಕ್ಷ ಹಣವನ್ನು ಬ್ಯಾಂಕ್ ಗೆ ಡೆಪಾಸಿಟ್ ಮಾಡಲು ಹೋಗುತ್ತಿರಬೇಕಾದರೆ ಹಿಂದಿನಿಂದ ಬಂದ ಬೈಕ್ ವೊಂದು ಶ್ರೀಕಾಂತ್ ಅವರ ಬೈಕ್ ಗೆ ಗುದ್ದಿದೆ. ಕೆಳಗೆ ಬಿದ್ದ ಶ್ರೀಕಾಂತ್ ಅವರಿಂದ ಬ್ಯಾಗ್ ಕಿತ್ತುಕೊಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೈಕ್ ನ ನೋಂದಣಿ ಸಂಖ್ಯೆಯನ್ನು ಗಮನಿಸಲು ಸಾಧ್ಯವಾಗಲಿಲ್ಲ ಎಂದು ಶ್ರೀಕಾಂತ್ ಪೊಲೀಸರಿಗೆ ತಿಳಿಸಿದ್ದಾರೆ.

ಹಣ ಸಾಗಣೆ ವಿಷಯ ತಿಳಿದವರೇ ಕೃತ್ಯ ಎಸಗಿರುವ ಸಾಧ್ಯತೆ ಇದ್ದು ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡಿದವರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com