ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಅಟೆಂಡರ್ ಒಬ್ಬ ಗುಂಡು ಹಾರಿಸಿ ಕೊಂದ ಘಟನೆ ಬೆಂಗಳೂರಿನ ಮಹಿಳಾ ಹಾಸ್ಟೆಲೊಂದರಲ್ಲಿ ನಡೆದಿದೆ.
ನಗರದ ಕಾಡುಗೋಡಿ ಬಳಿ ಇರುವ ರೆಸಿಡೆನ್ಷಿಯಲ್ಸ್ಕೂಲ್’ನಲ್ಲಿ ಈ ಘಟನೆ ನಡೆದಿದೆ. ತನ್ನನ್ನು ಪ್ರೀತಿಸುವಂತೆ ಅಟೆಂಡರ್ ಮಹೇಶ್ ಒತ್ತಾಯ ಮಾಡುತ್ತಿದ್ದ. ಇದನ್ನು ಒಪ್ಪದ ವಿದ್ಯಾರ್ಥಿನಿ ಗೌತಮಿಗೆ ಪಿಸ್ತೂಲ್ ನಿಂದ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದು ಅಲ್ಲದೇ ವಿದ್ಯಾರ್ಥಿನಿಯ ಸ್ನೇಹಿತೆ ಶಿರಿಶಾ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಮೃತ ವಿದ್ಯಾರ್ಥಿನಿ ಗೌತಮಿ ತುಮಕೂರು ಜಿಲ್ಲೆ ಪಾವಗಡದವಳು ಎಂದು ತಿಳಿದುಬಂದಿದ್ದು, ಆಕೆ ಕಾಲೇಜು ಹಾಸ್ಟೆಲ್’ನಲ್ಲಿ ತಂಗಿದ್ದಳು.
ಶಿವಮೊಗ್ಗ ಮೂಲದ ಮಹೇಶ 2012ರಿಂದ ಈ ಹಾಸ್ಟೆಲ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್ ಗೆ ಬಂದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿ ಮಹೇಶನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Advertisement