ಮಾದಕವಸ್ತು ಮಾರಾಟ ಮೂವರ ಬಂಧನ

ಯಶವಂತಪುರದಲ್ಲಿ ಮಾದಕ ವಸ್ತು ಚರಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 4 ಕೆ.ಜಿ. ಚರಸ್ ವಶಪಡಿಸಿಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಯಶವಂತಪುರದಲ್ಲಿ ಮಾದಕ ವಸ್ತು ಚರಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 4 ಕೆ.ಜಿ. ಚರಸ್ ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಬೇಲೂರಿನ ರಘು (34), ದಾಸರಕೊಪ್ಪಲು ಗ್ರಾಮದ ಕಿರಣ್ (29) ಹಾಗೂ ಹಳೇ ಕೊಪ್ಪಲು ಪ್ರದೇಶದ ಹೇಮಂತ್ ಕುಮಾರ್ (34) ಬಂಧಿತರು. ಇವರಿಂದ ರು.8 ಲಕ್ಷ ಮೌಲ್ಯದ 4 ಕೆ.ಜಿ. ಚರಸ್ 3 ಮೊಬೈಲ್ ಫೋನ್ ಹಾಗೂ ರು.900 ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಐಟಿಬಿಟಿ ಉದ್ಯೋಗಿಗಳಿಗೆ ಚರಸ್ ಪೂರೈಸುತ್ತಿದ್ದರು. ಯಶವಂತಪುರದಲ್ಲಿರುವ ಸ್ಟಾರ್ ಲಾಡ್ಜ್ ನ ಕೊಠಡಿಯಲ್ಲಿ ಚರಸ್ ಇರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿ ಕೊಂಡರಾಜ ಎಂಬಾತನಿಂದ ಚರಸ್ ನಗರಕ್ಕೆ ತಂದು ಎಲ್ಲರೂ ಮಾರಾಟ ಮಾಡುತ್ತಿದ್ದೆವೆಂದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com