ಮೋದಿ ಸರ್ಕಾರದ ಸಾಧನೆ ವಿವರಿಸಲು ಕಾರ್ಯಾಗಾರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಮನವರಿಕೆ ಮಾಡಿಕೊಡಲು ರಾಜ್ಯ ಬಿಜೆಪಿ ಮಾಧ್ಯಮ ಘಟಕವು ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ ಹಮ್ಮಿಕೊಂಡಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಮನವರಿಕೆ ಮಾಡಿಕೊಡಲು ರಾಜ್ಯ ಬಿಜೆಪಿ ಮಾಧ್ಯಮ ಘಟಕವು ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ ಹಮ್ಮಿಕೊಂಡಿದೆ.

ಒಂದು ವರ್ಷದ ಸಾಧನೆಯ ಅಂಶ, ಅಂಕಿ ಸಂಖ್ಯೆಗಳನ್ನು ಪಕ್ಷದ ಜಿಲ್ಲಾ ಮಟ್ಟದ ವಕ್ತಾರರು, ಸಹ ವಕ್ತಾರರಿಗೆ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳಿಗೆ ನೀಡಲಾ ಗುತ್ತದೆ. ಮೊದಲ ಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಅವರು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಮಾಹಿತಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಎರಡನೇ ಗೋಷ್ಠಿಯನ್ನು ಪಕ್ಷದ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹ ರಾವ್ ಮುನ್ನೆಡೆಸಲಿದ್ದು, ಸರ್ಕಾರದ ವಿರುದ್ಧ ಕೇಳಿಬಂದ ವಿವಾದಾತ್ಮಕ ಅಂಶ, ಟೀಕೆ ಬಗ್ಗೆ ಸ್ಪಷ್ಟೀಕರಣ ನೀಡುವರು. ಮೂರನೇ ಅವಧಿಯು ಪ್ರಶ್ನೋತ್ತರ ಇರಲಿದ್ದು, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಅಧ್ಯಕ್ಷತೆವಹಿಸುವರು.

ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಸುರೇಶ್ ಕುಮಾರ್, ಅಶ್ವತ್ಥ ನಾರಾಯಣ ಮತ್ತು ಮಾಧ್ಯಮ ಪ್ರಮುಖ ಎಸ್.ಪ್ರಕಾಶ್ ಉಪಸ್ಥಿತರಿರುವರು. ಪಕ್ಷದ ಪರವಾಗಿ ಟಿವಿ ಮಾಧ್ಯಮದಲ್ಲಿ
ಕಾಣಿಸಿಕೊಳ್ಳುವ ನಾಯಕರು, ಶಾಸಕರೂ ಸಹ ಕಾರ್ಯಾಗಾರದಲ್ಲಿ ಹಾಜರಿರುವರು. ಬಿ.ಎಸ್.ಯಡಿಯೂರಪ್ಪನವರು ಸಮಾರೋಪದಲ್ಲಿ ಪಾಲ್ಗೊಳ್ಳುವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com