ಮಳವಳ್ಳಿ: ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಇಬ್ಬರು ಬಾಲಕರು ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ನಿವಾಸಿಗಳಾದ ಹರ್ಷವರ್ಧನ್ (15), ಮತ್ತು ಹರಿಕೃಷ್ಣ (20) ಪ್ರವಾಸಕ್ಕೆಂದು ಮಳವಳ್ಳಿಯಲ್ಲಿರುವ ಮುತ್ತತ್ತಿಗೆ ತೆರಳಿದ್ದಾರೆ. ಅಲ್ಲಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ಸುಳಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ನಿನ್ನೆ ಬೆಳಗ್ಗೆ ಕುಟುಂಬ ಸಮೇತರಾಗಿ ಮುತ್ತತ್ತಿಗೆ ತೆರಳಿದ್ದರು. ದೇವಾಲಯದಲ್ಲಿ ಪೂಜೆ ಮುಗಿಸಿ ಊಟ ಮಾಡಿದ ನಂತರ ಕೆಲವರು ನೀರಿಗೆ ಇಳಿದಿದ್ದರು, ಆ ಸಮಯದಲ್ಲಿ ಇಬ್ಬರು ಬಾಲಕರು ತಾಯಿ ರೇವತಿ ಎದುರೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಬೆಳಗ್ಗಿನಿಂದ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.