ಒಂದೇ ದಿನ ನಗರದ ಮೂವರ ಸರ ಕಳವು

ತ್ಯಾಗರಾಜನಗರ, ಕಾಟನ್ ಪೇಟೆಯಲ್ಲಿ ಸರಗಳ್ಳರು ಬುಧವಾರ ಮೂವರು ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತ್ಯಾಗರಾಜನಗರ, ಕಾಟನ್ ಪೇಟೆಯಲ್ಲಿ ಸರಗಳ್ಳರು ಬುಧವಾರ  ಮೂವರು ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಎನ್.ಆರ್.ಕಾಲೋನಿ ರಸ್ತೆಗೆ ಬೆಳಗ್ಗೆ 9.30 ರ ಸುಮಾರಿಗೆ ಬೈಕ್ ನಲ್ಲಿ ಬಂದ ಸರಗಳ್ಳರು ದೇವಸ್ಥಾನದಿಂದ ಪಾರ್ವತಮ್ಮ ಎಂಬುವರ ಸರ ಕಸಿದುಕೊಂಡಿದ್ದಾರೆ.
ಬಳಿಕ ತ್ಯಾಗರಾಜ ರಸ್ತೆ 5ನೇ ಮುಖ್ಯ ರಸ್ತೆಗೆ ಬಂದ ಕಳ್ಳರು ಇದೇ ಮಾರ್ಗದಲ್ಲಿ   ಆಟೋ ನಿಲ್ದಾಣಕ್ಕೆ ನಡೆದು ಬರುತ್ತಿದ್ದ ವಿಮಲಾ ಎಂಬುವರ ಸರ ಕಸಿದಿದ್ದಾರೆ.

ಕಾಟನ್ ಪೇಟೆಯ ಓಬಳಯ್ಯ ರಸ್ತೆಯಲ್ಲಿ ಬೆಳಗ್ಗೆ 6.30ರ ಸುಮಾರಿನಲ್ಲಿ ಹೂ ಮಾರುತಿದ್ದ ಮಹದೇವಮ್ಮ ಎಂಬುವವರಿಂದ ಕಳ್ಳನೊಬ್ಬ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com