ಬೆಂಗಳೂರು: ತ್ಯಾಗರಾಜನಗರ, ಕಾಟನ್ ಪೇಟೆಯಲ್ಲಿ ಸರಗಳ್ಳರು ಬುಧವಾರ ಮೂವರು ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದಾರೆ.
ಎನ್.ಆರ್.ಕಾಲೋನಿ ರಸ್ತೆಗೆ ಬೆಳಗ್ಗೆ 9.30 ರ ಸುಮಾರಿಗೆ ಬೈಕ್ ನಲ್ಲಿ ಬಂದ ಸರಗಳ್ಳರು ದೇವಸ್ಥಾನದಿಂದ ಪಾರ್ವತಮ್ಮ ಎಂಬುವರ ಸರ ಕಸಿದುಕೊಂಡಿದ್ದಾರೆ.
ಬಳಿಕ ತ್ಯಾಗರಾಜ ರಸ್ತೆ 5ನೇ ಮುಖ್ಯ ರಸ್ತೆಗೆ ಬಂದ ಕಳ್ಳರು ಇದೇ ಮಾರ್ಗದಲ್ಲಿ ಆಟೋ ನಿಲ್ದಾಣಕ್ಕೆ ನಡೆದು ಬರುತ್ತಿದ್ದ ವಿಮಲಾ ಎಂಬುವರ ಸರ ಕಸಿದಿದ್ದಾರೆ.
ಕಾಟನ್ ಪೇಟೆಯ ಓಬಳಯ್ಯ ರಸ್ತೆಯಲ್ಲಿ ಬೆಳಗ್ಗೆ 6.30ರ ಸುಮಾರಿನಲ್ಲಿ ಹೂ ಮಾರುತಿದ್ದ ಮಹದೇವಮ್ಮ ಎಂಬುವವರಿಂದ ಕಳ್ಳನೊಬ್ಬ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
Advertisement