4 ರಾಷ್ಟ್ರಪತಿ ಪದಕ ವಾಪಸಿಗೆ ಮುಂದಾದ ನಿವೃತ್ತ ಯೋಧ

ಕೆಪಿಎಸ್‍ಸಿಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ನಿವೃತ್ತ ಯೋಧ ಮೇಜರ್ ಜಯ ಪ್ರಕಾಶ್ ತಮಗೆ ದೇಶ ನೀಡಿದ 4 ರಾಷ್ಟ್ರಪತಿ ಪದಕದ ಗೌರವವನ್ನು ಹಿಂತಿರುಗಿಸಿದ್ದಾರೆ...
ರಾಷ್ಟ್ರಪತಿ ಪದಕ ಹಿಂದುರಿಗಿಸಿದ ಮೇಜರ್ ಜಯ ಪ್ರಕಾಶ್ (ಸಂಗ್ರಹ ಚಿತ್ರ)
ರಾಷ್ಟ್ರಪತಿ ಪದಕ ಹಿಂದುರಿಗಿಸಿದ ಮೇಜರ್ ಜಯ ಪ್ರಕಾಶ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕೆಪಿಎಸ್‍ಸಿಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ನಿವೃತ್ತ ಯೋಧ ಮೇಜರ್ ಜಯ ಪ್ರಕಾಶ್ ತಮಗೆ ದೇಶ ನೀಡಿದ 4 ರಾಷ್ಟ್ರಪತಿ ಪದಕದ ಗೌರವವನ್ನು ಹಿಂತಿರುಗಿಸಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಹೋರಾಡುವುದೂ ಸೇರಿದಂತೆ ವಿವಿಧ ಸೇನಾ ಕಾರ್ಯಾಚರಣೆಗಳಲ್ಲಿ ಅವರು ತೋರಿದ ಸಾಹಸಕ್ಕೆ ರಾಷ್ಟ್ರಪತಿ ಪದಕಗಳು ದೊರೆತಿತ್ತು. ಕೆಪಿಎಸ್ಸಿಯಿಂದ 4 ಸಲ ನಡೆದ ಕೆಎಎಸ್ ಪರೀಕ್ಷೆ ಬರೆದು, ಎರಡು ಬಾರಿ ಸಂದರ್ಶನದಲ್ಲಿ ಲಂಚದ ಸವಾಲು ಎದುರಿಸಿದ ಅವರು ಈಗ ಮನನೊಂದು ದೇಶ ಕೊಟ್ಟ ಗೌರವವನ್ನು ದೇಶಕ್ಕೇ ವಾಪಸ್ ಕೊಡುತ್ತೇನೆ ಎಂದಿದ್ದಾರೆ. ಕಳೆದ  2001ರಲ್ಲಿ ಸೇನೆಗೆ ಸೇರಿ 8 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಅವರು ಕೆಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಈ ನಡುವೆ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರೂ, ಸಂದರ್ಶ ನದ ವೇಳೆ ಲಂಚ ನೀಡಲಿಲ್ಲವೆಂದು ತಿರಸ್ಕೃತರಾಗಿದ್ದಾರೆ.

ದೇಶದ ಒಟ್ಟು ಭ್ರಷ್ಟತೆಗೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದು, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಅವರು ಆಡಿದ ಮಾತುಗಳು...

ಸೇನೆಯಿಂದ ನಿವೃತ್ತಿಯಾದ ಬಳಿಕ 200809 ನೇ ಸಾಲಿನಲ್ಲಿ ಕೆಎಎಸ್ ಮುಖ್ಯ ಪರೀಕ್ಷೆ ಬರೆದು ಉತ್ತೀರ್ಣನಾದೆ. ಸಂದರ್ಶನದಲ್ಲಿ `ಫೀಲ್ಡ್ ಮಾರ್ಷಲ್ ಎಷ್ಟು ಮಂದಿಯಿದ್ದಾರೆ?' ಎಂಬ ಒಂದೇ ಪ್ರಶ್ನೆ ಕೇಳಿದರು. ಅದಕ್ಕೆ ನಾನು ಸರಿಯಾದ ಉತ್ತರ ನೀಡಿದೆ. ಇದೊಂದೇ ಪ್ರಶ್ನೆ ಕೇಳಿದ ಬಳಿಕ ನಿಮ್ಮ ಸಂದರ್ಶನ ಮುಗಿಯಿತು ಎಂದರು. ನಂತರ ಹೊರಗಿದ್ದ ಕೆಪಿಎಸ್ ಸಿಯ ಸದಸ್ಯರೊಬ್ಬರು, `ನೀವು  25 ಲಕ್ಷ ನೀಡಿದರೆ ತಹಸೀಲ್ದಾರ್ ಆಗಬಹುದು' ಎಂದರು. ಆದರೆ ನಾನು, `ಪ್ರಾಮಾಣಿಕರಾಗಿರಿ ಎಂದು ಸೇನೆ ನಮಗೆ ಕಲಿಸಿಕೊಟ್ಟಿದೆ, ಹೀಗಾಗಿ ಲಂಚ ನೀಡುವುದಿಲ್ಲ' ಎಂದು ಹೇಳಿ ನಿರಾಕರಿಸಿದೆ.  ನಂತರ ವಿಪ್ರೊ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದೆ. 2011ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣನಾಗಲಿಲ್ಲ.

2012ರಲ್ಲಿ ಬರೆದು ಸಂದರ್ಶನಕ್ಕೆ ಹಾಜರಾದಾಗ, `ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ?' ಎಂಬ ಒಂದೇ ಪ್ರಶ್ನೆ ಕೇಳಿ ಸುಮ್ಮನಾದರು. ಹೊರಗೆ ಬಂದರೆ ಕೆಪಿಎಸ್‍ಸಿ ಸದಸ್ಯರೊಬ್ಬರು, `30 ಲಕ್ಷ ನೀಡಿದರೆ ಕೆಲಸ ಸಿಗುತ್ತದೆ' ಎಂದರು. ನಾನು ಇದನ್ನೂ ತಿರಸ್ಕರಿಸಿ ಬಂದೆ. ಕಳೆದ 2015 ನೇ ಸಾಲಿನ ಪರೀಕ್ಷೆಯನ್ನೂ ಬರೆದಿದ್ದೇನೆ. ಆದರೆ ಇತ್ತೀಚೆಗೆ ಕೆಪಿಎಸ್‍ಸಿ ಕುರಿತ ವರದಿಯೊಂದನ್ನು ಓದಿದ  ಬಳಿಕ ಈ ಬಾರಿಯ ಸಂದರ್ಶನಕ್ಕೆ ಹಾಜರಾಗುವ ಆಸಕ್ತಿ ಕಳೆದುಕೊಂಡಿದ್ದೇನೆ. ಇದಕ್ಕೆ ರಾಜ ಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಕಾರಣರಾಗಿದ್ದಾರೆ. ಕೆಪಿಎಸ್ಸಿಯೊಂದರಲ್ಲೇ ಇಷ್ಟೊಂದು  ಭ್ರಷ್ಟಾಚಾರವೆಂದರೆ ಇನ್ನು ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಎಷ್ಟು ಭ್ರಷ್ಟಾಚಾರವಿದೆ? ಸಮೈನಿಕರು ದೇಶವನ್ನು ತಾಯಿ ಎಂದು ತಿಳಿದು ಕೆಲಸ ಮಾಡುತ್ತಾರೆ. ಈ ಭಾವನೆ ರಾಜಕಾರಗಳಲ್ಲಿ ಏಕಿಲ್ಲ? ನನಗೆ ಕೆಲಸ ಸಿಗಲಿಲ್ಲವೆಂದು ನಾನು ಪದಕ ವಾಪಸ್ ಮಾಡುತ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ಲಂಚಗುಳಿತನದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದೇನೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಬದಲಾಗಬೇಕಿದೆ. ಇಷ್ಟೆಲ್ಲಾ ದೇಶ ಸೇವೆ ಮಾಡಿಯೂ ಸಮೈನಿಕರಿಗೆ ಗೌರವವಿಲ್ಲ.

ಈ ಎಲ್ಲ ಕಾರಣಗಳಿಂದ ಪದಕ ಹಿಂತಿರುಗಿ ಸುತ್ತಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಯಾವುದೇ ಒತ್ತಡಗಳಿಂದ ನಾನು ತೀರ್ಮಾನ ಕೈಗೊಂಡಿಲ್ಲ. ರಾಜ್ಯಪಾಲರಿಗೆ ಪತ್ರ ಬರೆದಿದ್ದು,  ಅವರ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಮಾತು ಮುಗಿಸಿ ಹೊರಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com