ಮಂಜಿನಿಂದ ವಿಮಾನ ಸಂಚಾರ ವಿಳಂಬ

ಕೆಂಪೇಗೌಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ನಿರ್ಗಮನ ಹಾಗೂ ಆಗಮನ ಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶನಿವಾರ... ಬೆಳಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ನಿರ್ಗಮನ ಹಾಗೂ ಆಗಮನ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ನಿರ್ಗಮನ ಹಾಗೂ ಆಗಮನ ಸೇರಿ ಒಟ್ಟು 100ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿ ಪ್ರಯಾಣಿಕರು ಪರದಾಡಿದರು.

ಶನಿವಾರ ಬೆಳಗ್ಗೆ 4.30ರಿಂದ 8.10ರ ನಡುವೆ ದಟ್ಟ ಮಂಜು ಆವರಿಸಿದ್ದ ಕಾರಣ ರನ್‍ವೇ ಸಂಪೂರ್ಣವಾಗಿ ಕಾಣಿಸುತ್ತಿರಲಿಲ್ಲ. ಆಗಮಿಸಬೇಕಿದ್ದ ವಿಮಾನಗಳನ್ನು ಬೇರೆ ಏರ್‍ಪೊೀರ್ಟ್‍ಗಳಿಗೆ ಕಳುಹಿಸಲಾಯಿತು. ನಗರದಿಂದ ದೇಶದ ನಾನಾ ಭಾಗಗಳು ಹಾಗೂ ವಿದೇಶಗಳಿಗೆ ಹೊರಡಬೇಕಿದ್ದ 70 ಹಾಗೂ ಆಗಮಿಸಬೇಕಿದ್ದ 36 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.

ಈ ಪೈಕಿ ಆ್ಯಮ್ ಸ್ಟರ್‍ಡಮ್, ದುಬೈ, ದೋಹಾ ಹಾಗೂ ಲಂಡನ್‍ಗೆ ತೆರಳಬೇಕಿದ್ದ ಅಂತಾರಾಷ್ಟ್ರೀ ಯ ಮಾರ್ಗದ ವಿಮಾನಗಳು ಸೇರಿವೆ. ಇದರಿಂದ ಸಾವಿ ರಾರು ಪ್ರಯಾಣಿಕರು ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು. 8 ಗಂಟೆ ಬಳಿಕ ಮಂಜು ಮಾಯವಾಗುತ್ತಿದ್ದಂತೆ ವಿಮಾನಗಳ ಹಾರಾಟವನ್ನು ನಂತರ ಆರಂಭಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com