ಗಾಂಜಾ ನಶೆಯಲ್ಲಿ ಇರಿತ: ಆರೋಪಿ ಸೆರೆ

ಗಾಂಜಾ ನಶೆಯಲ್ಲಿ ರೌಡಿ ಶೀಟರ್ ವೊಬ್ಬ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಶೇಷಾದ್ರಿಪುರದ ಲಕ್ಷ್ಮೀನಾರಾಯಣಪುರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಗಾಂಜಾ ನಶೆಯಲ್ಲಿ ರೌಡಿ ಶೀಟರ್ ವೊಬ್ಬ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಶೇಷಾದ್ರಿಪುರದ ಲಕ್ಷ್ಮೀನಾರಾಯಣಪುರಿಯಲ್ಲಿ ನಡೆದಿದೆ. ಲಕ್ಷ್ಮೀನಾರಾಯಣಪುರಿ ನಿವಾಸಿ ಶಂಕರ್ ಎಂಬಾತನೇ ಇರಿತಕ್ಕೆ ಒಳಗಾದವ. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. 
ಈ ಸಂಬಂಧ ಆರೋಪಿ ಪಾಂಡಿಯನ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಯತ್ನ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಾಂಡಿಯನ್, ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಸ್ನೇಹಿತ ಶಂಕರ್ ಕೂಡಾ ಪೇಂಟಿಂಗ್ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಶನಿವಾರ ರಾತ್ರಿ ಮೆಜೆಸ್ಟಿಕ್ ಗೆ ತೆರಳಿದ್ದು ಮದ್ಯಪಾನ ಮಾಡಿ ಗಾಂಜಾ ಸೇದಿದ್ದಾರೆ. 
ಗಾಂಜಾ ಹಂಚಿಕೊಳ್ಳುವ ವಿಚಾರವಾಗಿ ಇಬ್ಬರು ಜಗಳವಾಡಿಕೊಂಡು ಲಕ್ಷ್ಮೀ ನಾರಾಯಣಪುರಿಗೆ ಬಂದಿದ್ದರು. ರಾತ್ರಿ 9.30ರ ಸುಮಾರಿಗೆ ಮತ್ತೊಮ್ಮೆ ಜಗಳವಾದಾಗ ಕುಪಿತಗೊಂಡ ಪಾಂಡಿಯನ್ ಬೀಯರ್ ಬಾಟಲಿ ಯನ್ನು ಒಡೆದು ಅದನ್ನು ಶಂಕರ್ ಕಿಬ್ಬೊಟ್ಟೆಗೆ ತಿವಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಕೂಗಾಡುತ್ತಿದ್ದ ಶಂಕರ್ ನನ್ನು ಸ್ಥಳೀಯರು ಕೂಡಲೇ ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಪ್ರಾಣಾ ಪಾಯದಿಂದ ಪಾರಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರ ಪೊಲೀಸರು ಪಾಂಡಿಯನ್‍ನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com