ರಾಜ್ಯದಲ್ಲಿ ಗೋಮಾಂಸ ನಿಷೇಧವಿಲ್ಲ: ಸಚಿವ ಆಂಜನೇಯ

ಗೋಮಾಂಸ ಭಕ್ಷಣೆ ಅಂತರಾಷ್ಟ್ರೀಯ ಆಹಾರ ಪದ್ಧತಿಯ ಒಂದು ಭಾಗ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಹೇಳಿದ್ದಾರೆ...
ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ (ಸಂಗ್ರಹ ಚಿತ್ರ)
ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ (ಸಂಗ್ರಹ ಚಿತ್ರ)
Updated on

ವಿಜಯಪುರ: ಗೋಮಾಂಸ ಭಕ್ಷಣೆ ಅಂತರಾಷ್ಟ್ರೀಯ ಆಹಾರ ಪದ್ಧತಿಯ ಒಂದು ಭಾಗ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಹೇಳಿದ್ದಾರೆ.

ಆಹಾರ ಪದ್ಧತಿ ಅವರವರ ಇಷ್ಟಕ್ಕನುಗುಣವಾಗಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಗೋಮಾಂಸ ಸೇವನೆ ಮೇಲೆ ಯಾವುದೇ ರೀತಿಯ ನಿಷೇದ ಹೇರಲು ಸರ್ಕಾರ ಸಿದ್ಧವಿಲ್ಲ ಎಂದರು.

ಮೌಢ್ಯಾಚಾರಣೆ ನಿಷೇಧ ಕಾಯ್ದೆ ಬಗ್ಗೆ ಪರ ವಿರೋಧ ಅಭಿಪ್ರಾಯ ಪಡೆದು ಅಂತಿಮವಾಗಿ ಅದರ ಸಾಧಕ, ಬಾಧಕಗಳನ್ನು ಅರಿತು ಕಾಯ್ದೆ ರೂಪ ನೀಡಲಾಗುವುದು. ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ನಿವಾರಿಸಲು ಈ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ದಲಿತ ಮುಖ್ಯಮಂತ್ರಿ ಕೂಗು ಸದ್ಯಕ್ಕಿಲ್ಲ. 2018ಕ್ಕೆ ಆ ಕೂಗು ಮಹತ್ವ ಪಡೆಯಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com