ಹುಸಿಬಾಂಬ್ ಕರೆ

ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದ ಕ್ರೀಡಾ ಸಾಮಗ್ರಿಗಳ ಶೋ ರೂಂಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಹುಸಿ ಬಾಂಬ್ ಕರೆ ಮಾಡಿ ಆತಂಕ ಸೃಷ್ಟಿಸಿದ್ದ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದ ಕ್ರೀಡಾ ಸಾಮಗ್ರಿಗಳ ಶೋ ರೂಂಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಹುಸಿ ಬಾಂಬ್ ಕರೆ ಮಾಡಿ
ಆತಂಕ ಸೃಷ್ಟಿಸಿದ್ದ.

ಡೆಕತ್ಲಾನ್ ಶೋ ರೂಂನ ವ್ಯವಸ್ಥಾಪಕ ರವೀಂದ್ರ ಎಂಬುವರ ಮೊಬೈಲ್ ಫೋನ್‍ಗೆ ಸಂಜೆ 4.30ರ ಸುಮಾರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಶೋರೂಂನ ಒಳಗೆ ಬಾಂಬ್
ಇಡಲಾಗಿದ್ದು ಸ್ಪೋಟಗೊಳ್ಳಲಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ.

ನಂತರ ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳ ಸಿಬ್ಬಂದಿ ಸುಮಾರು 1 ತಾಸು ಕಾಲ ಶೋಧ ಕಾರ್ಯ ನಡೆಸಿರೂ ಬಾಂಬ್ ಪತ್ತೆಯಾಗಲಿಲ್ಲ. ಟವರ್ ಲೋಕೇ ಶನ್ ಒಡಿಶಾದಲ್ಲಿದೆ.ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com