ಬೆಂಗಳೂರು: ಫೆಬ್ರವರಿ 10 ರಂದು ನಗರದ ಹೆಣ್ಣೂರಿನ ಬಂಜಾರ ಲೇಔಟ್ನ ಆಫ್ರಿಕನ್ ಕೀವ್ ರೆಸ್ಟೋರೆಂಟ್ ನಲ್ಲಿ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದ ವೇಳೆ ಉಗಾಂಡಾ ಮೂಲದ ಯುವತಿಗೆ ನೈಜಿರಿಯಾ ಮೂಲದ ಯುವಕ ಚೂರಿ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಯುವತಿಯನ್ನು ಉಗಾಂಡ ಮೂಲದ ಶಕೀರಾ ಎಂದು ತಿಳಿದುಬಂದಿದೆ. ಇನ್ನು ಹಲ್ಲೆ ನಡೆಸಿದ ಯುವಕ ನೈಜಿರಿಯಾದ ದೇಶದ ಒನ್ಸಾಸ್ ಎನ್ನಲಾಗಿದೆ. ಗೆಳತಿಯೊಂದಿಗೆ ಊಟಕ್ಕೆ ಹೋಗಿದ್ದಾಗ ಶಕೀರಾ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಕುಡಿದ ಕತ್ತಿನಲ್ಲಿ ರಂಪಾಟ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಈ ಬಗ್ಗೆ ಉಗಾಂಡ ರಾಯಭಾರ ಕಚೇರಿ ಅಧಿಕಾರಿಗಳಿಗೆ ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಉಗಾಂಡ ರಾಯಭಾರ ಅಧಿಕಾರಿಗಳು ಭೇಟಿ ನೀಡಿ ಯುವತಿಯಿಂದ ಮಾಹಿತಿ ಪಡೆದಿದ್ದಾರೆ.
Advertisement