ಸಿಎಂಗೂ ನೀಡಿ ಗೌರವ ಡಾಕ್ಟರೇಟ್! ಬೆಂವಿವಿಗೆ ಪತ್ರ

ವಿವಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೂ ಗೌರವ ಡಾಕ್ಟರೇಟ್ ನೀಡಬೇಕೆಂಬ ಕೋರಿಕೆ ಪತ್ರವೊಂದು ವಿಶ್ವವಿದ್ಯಾಲಯದ ಕೈ ಸೇರಿದೆ. 51ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್(ಗೌಡಾ) ನೀಡಲು ಸಮಿತಿ ರಚಿಸುವ ಮೊದಲೇ ಆಕಾಂಕ್ಷಿಗಳು ತಮ್ಮ ಸ್ವವಿವರ ಪತ್ರಗಳನ್ನು ವಿವಿಹೆ ಕಳುಹಿಸಲು ಪ್ರಾರಂಭಿಸಿದ್ದಾರೆ...
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಿವಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೂ ಗೌರವ ಡಾಕ್ಟರೇಟ್ ನೀಡಬೇಕೆಂಬ ಕೋರಿಕೆ ಪತ್ರವೊಂದು ವಿಶ್ವವಿದ್ಯಾಲಯದ ಕೈ ಸೇರಿದೆ. 51ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ (ಗೌಡಾ) ನೀಡಲು ಸಮಿತಿ ರಚಿಸುವ ಮೊದಲೇ ಆಕಾಂಕ್ಷಿಗಳು ತಮ್ಮ ಸ್ವವಿವರ ಪತ್ರಗಳನ್ನು ವಿವಿಹೆ ಕಳುಹಿಸಲು ಪ್ರಾರಂಭಿಸಿದ್ದಾರೆ.

ಈಗಾಗಲೇ ಅನೇಕ ಗಣ್ಯರು ಅರ್ಜಿ ಸಲ್ಲಿಸಿದ್ದಾರೆ. ಒಂದು ರೀತಿಯಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಿದೆ.  ಆಶ್ಚರ್ಯಕಾರಿ ಸಂಗತಿ ಎಂದರೆ ಈ ಪೈಕಿ ಸಿದ್ದರಾಮಯ್ಯ ಅವರಿಗೂ ಗೌಡ ನೀಡಬೇಕೆಂದು ಅವರ ಅಭಿಮಾನಿಗಳು ಸ್ವವಿವರ ಪತ್ರವೊಂದನ್ನು ಸಲ್ಲಿಸಿದ್ದಾರೆ. ಸದ್ಯ ಇದುವರೆಗೂ ಸುಮಾರು 20ಕ್ಕೂ ಗಣ್ಯರಿಂದ ಹೆಚ್ಚಿನ ಸ್ವವಿವರ ಪತ್ರಗಳು ವಿವಿ ಕೈ ಸೇರಿದೆ.

ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಘಟಿಕೋತ್ಸವ ನಡೆಸಲು ವಿವಿ ಚಿಂತಿಸಿದೆ. ಈ ಸಂಬಂಧ ಗೌರವ ಡಾಕ್ಟರೇಟ್ ಗೆ ಅರ್ಹ ವ್ಯಕ್ತಿಗಳ ಆಯ್ಕೆಯಾಗಿ ವಿಶ್ರಾಂತ ಕುಲಪತಿಗಳ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ ಎಂದು ಬೆಂ.ಕುಲಸಚಿವೆ ಪ್ರೊ. ಕೆಕೆ.ಸೀತಮ್ಮ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com