
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದ ಪ್ರಕರಣ ಸಂಬಂಧ ಮೇಯರ್ ಮಂಜುನಾಥ್ ರೆಡ್ಡಿಗೆ ಸಿಟಿ ಸಿವಿಲ್ ಕೋರ್ಟ್ ಸಮನ್ಸ್ ನೀಡಲು ಆದೇಶಿಸಿದೆ.
ಮಂಜುನಾಥ್ ರೆಡ್ಡಿ ಮಡಿವಾಳ ವಾರ್ಡ್ನಿಂದ ಚುನಾವಣೆಗೆ ಸ್ಪರ್ಧಿಸುವ ವೇಳೆ, ನಾನು ಪಾನ್ ಕಾರ್ಡ್ ಹೊಂದಿಲ್ಲ. ಕಂದಾಯ ಕಟ್ಟಿಲ್ಲ ಎಂದು ಸುಳ್ಳು ಪ್ರಮಾಣಪತ್ರ ನೀಡಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತ ನೀಡಿದ್ದಾರೆ. ಆದರೆ, ರೆಡ್ಡಿ ಅವರು ಪಾವಗಡ ಸಹಕಾರಿ ಬ್ಯಾಂಕ್ನಲ್ಲಿ ರು.28 ಲಕ್ಷ ಹಾಗೂ ಐಸಿಐಸಿಐ ಬ್ಯಾಂಕ್ನಲ್ಲಿ ರು.5 ಲಕ್ಷ ಪಡೆದಿದ್ದಾರೆ. ಯಾವುದೇ ಬ್ಯಾಂಕ್ ಇಷ್ಟೊಂದು ಹಣವನ್ನು ಪಾನ್ ಕಾರ್ಡ್ ಇಲ್ಲದೆ ಕೊಡುವುದಿಲ್ಲ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ವಕೀಲ ಅಮೃತೇಶ್, ಮಂಜುನಾಥ್ ರೆಡ್ಡಿ ವಿರುದ್ಧ ಕೋರ್ಟ್ಗೆ ದೂರು ಸಲ್ಲಿಸಿದ್ದರು.
Advertisement