ನಿನ್ನೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಸಂಭವಿಸಿದ್ದ ಹಿಂಸಾಚಾರ ಮತ್ತು ಆ ಬಳಿಕ ನಡೆದ ಕಾರ್ಯಕರ್ತರ ಸಂಘರ್ಷ ಮುಂದಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ತನ್ನ ಸಾಂವಿಧಾನಿಕ ಹಕ್ಕು ಚಲಾವಣೆ ಮಾಡಿ ಬಂಗಾಳಗಲ್ಲಿ ಪ್ರಚಾರದ ಅವಧಿಯನ್ನು 1 ಕಡಿತ ಮಾಡಿತ್ತು. ಈ ವಿಚಾರ ಇದೀಗ ದೇಶದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆಯೋಗದ ನಿರ್ಧಾರವನ್ನು ವಿಪಕ್ಷಗಳು ಖಂಡಿಸಿವೆ.