ದಂಪತಿ ಬಳಿ ಅಪಾರ ಪ್ರಮಾಣದ ಹಣ, ಆಭರಣ ಇರುವ ಬಗ್ಗೆ ತಿಳಿದಿದ್ದ ಆರೋಪಿ ಪ್ರೇಮಚಂದ್, ಆಗಾಗ ವೃದ್ಧ ದಂಪತಿಯಿಂದ ಸಾಲ ಪಡೆಯುತ್ತಿದ್ದ ಎನ್ನಲಾಗಿದೆ. ಏಪ್ರಿಲ್ 22ರಂದು ದಂಪತಿ ಮನೆಗೆ ತನ್ನ ಸ್ನೇಹಿತ ಚಂದ್ರಶೇಖರನೊಂದಿಗೆ ಹೋಗಿದ್ದ ಪ್ರೇಮ್ ಚಂದ್ 50 ಸಾವಿರ ಹಣ ಕೇಳಿದ್ದು, ಈ ವೇಳೆ ಪರ್ವತರಾಜ್ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ದಂಪತಿಯನ್ನು ಕೊಲೆಮಾಡಿದ್ದರು. ಈ ಸಂಬಂಧ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.