ಗೋವಿಂದ್ ಶರ್ಮಾ ರನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುವುದಾಗಿ ಹೇಳಿದ್ದ ಮಹಿಳೆ ಶರ್ಮಾಗೆ ಕರೆ ಮಾಡಿ, ಗಿಫ್ಟ್ ಹಾಗೂ ಬೃಹತ್ ಪ್ರಮಾಣದ ಹಣದೊಂದಿಗೆ ಬೆಂಗಳೂರು ಅಂತಾರಾಶ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುವ ನನ್ನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರಿಗೆ 1.5 ಲಕ್ಷ ಕೊಟ್ಟರೆ ಬಿಡುತ್ತಾರೆ ಎಂದು ಹೇಳುತ್ತಾಳೆ, ಅಷ್ಟೇ ಅಲ್ಲದೇ ಗೋವಿಂದ್ ಶರ್ಮಾ ಅವರನ್ನು ನಂಬಿಸಲು ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನೂ ಸಹ ದೂರವಾಣಿ ಮೂಲಕ ಮಾತನಾಡಿಸುತ್ತಾರೆ. ಅಲೆಕ್ಸ್ ಹೇಳಿದ್ದನ್ನೆಲ್ಲಾ ನಂಬಿದ ಗೋವಿಂದ್ ಶರ್ಮಾ, ಆಕೆಯ ಖಾತೆಗೆ 1.5 ಲಕ್ಷ ರೂ ಕಳಿಸುತ್ತಾರೆ. ಆದರೆ ವಂಚನೆಗೊಳಗಾಗಿರುವುದನ್ನು ಅರಿಯುವುದಕ್ಕೆ ಗೋವಿಂದ್ ಶರ್ಮಾ ಅವರಿಗೆ ಕೆಲವು ದಿನಗಳೇ ಬೇಕಾಯಿತು. ನಂತರ ಹುಳಿಮಾವು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.