ಬೆಂಗಳೂರು: 2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಭುವನೇಶ್ವರಿನಗರದ ಶಶಾಂಕ್ , ಮಧು ಕುಮಾರ್, ನಾಗರಾಜು, ಕಿರಣ್ ಕುಮಾರ್, ಬಂಧಿತರು. ಆರೋಪಿಗಳಿಂದ ಎಂಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಲ್ಲತ್ತಹಳ್ಳಿಯ ವರಲಕ್ಷ್ಮಿ ವೈನ್ ಶಾಪ್ಗೆ ಹೋಗಿದ್ದ ಆರೋಪಿಗಳು, 2 ರು. ಸಾವಿರ ಮುಖಬೆಲೆಯ ಜೆರಾಕ್ಸ್ ನೋಟನ್ನು ಶಾಪ್ ಮಾಲೀಕ ನಾಗೇಶ್ ಅವರಿಗೆ ಕೊಟ್ಟಿದ್ದರು. ಆದರೆ ಅದು ನಕಲಿ ನೋಟು ಎಂದು ಕಂಡು ಹಿಡಿದ ನಾಗೇಶ್ ಇಬ್ಬರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ 8 ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನ ಭಾರತಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement