ಬೆಂಗಳೂರು: ಮೆಟ್ರೋ ನಿಲ್ದಾಣದ ಎಸ್ಕಲೇಟರ್ ಮೇಲೆ ಮಹಿಳೆಯೊಬ್ಬರು ಬಿದಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣ (ವಿಧಾನಸೌಧ)ದ ಬಳಿ ಶುಕ್ರವಾರ ಸಂಜೆ ನಡೆದಿದೆ.
ನಿನ್ನೆ ಸಂಜೆ 7.30ರ ಸುಮಾರಿಗೆ ಮಹಿಳೆಯೊಬ್ಬು ಕುಟುಂಬಸ್ಥರೊಂದಿಗೆ ಮೆಟ್ರೋ ಹತ್ತಿದ್ದಾರೆ. ನಂತರ ಹೈ ಕೋರ್ಟ್ ಬಳಿ ಬರುತ್ತಿದ್ದಂತೆ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಮಗ ರೈಲು ಇಳಿದಿದ್ದಾನೆ. ನಂತರ ಮಗ ಇಳಿದಿದ್ದನ್ನು ನೋಡಿದ ಮಹಿಳೆ ತರಾತುರಿಯಲ್ಲಿ ತಾನು ಇಳಿಯಲು ಯತ್ನಿಸಿದ್ದಾಳೆ. ಈ ವೇಳೆ ಎಸ್ಕಲೇಟರ್ ಮೇಲೆ ಮಹಿಳೆಯ ಕಾಲು ಜಾರಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿದ ಮಹಿಳೆ ಬಿದ್ದಿದ್ದಾರೆ. ಈ ವೇಳೆ ಹಿಂದೆಯೇ ಇದ್ದ ಆಕೆಯ ಪತಿ ಅವರನ್ನು ಹಿಡಿದುಕೊಂಡು ರಕ್ಷಿಸಿದ್ದಾರೆ. ಕ್ಷಣ ಮಾತ್ರದಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅಲ್ಲಿನ ಸಿಬ್ಬಂದಿಗಳು ಗಾಬರಿಗೊಂಡಿದ್ದು, ಕೂಡಲೇ ತುರ್ತಾಗಿ ರೈಲನ್ನು ನಿಲ್ಲಿಸಿದ್ದಾರೆ.
ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement