ಬೆಂಗಳೂರು : ಟ್ರಯಲ್ ನೋಡುವುದಾಗಿ ಹೇಳಿ ಕಾರು ಕದ್ದು ಪರಾರಿಯಾಗಿದ್ದ ಕಳ್ಳನ ಬಂಧನ

:ಓಎಲ್‌ಎಕ್ಸ್‌ ನಲ್ಲಿ ಮಾರಾಟಕ್ಕಾಗಿ ಇಟ್ಟಿದ್ದ ಕಾರನ್ನು ಟ್ರಯಲ್‌ ನೋಡುವುದಾಗಿ ಹೇಳಿ ಪರಾರಿಯಾಗಿದ್ದ ಖದೀಮನನ್ನು ಬೆಂಗಳೂರು ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು :ಓಎಲ್‌ಎಕ್ಸ್‌ ನಲ್ಲಿ ಮಾರಾಟಕ್ಕಾಗಿ ಇಟ್ಟಿದ್ದ ಕಾರನ್ನು ಟ್ರಯಲ್‌ ನೋಡುವುದಾಗಿ ಹೇಳಿ ಪರಾರಿಯಾಗಿದ್ದ ಖದೀಮನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸುನೀಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಜೂನ್ 18 ರಂದು ಅಭಿಷೇಕ್‌ ಎನ್ನುವವರು ಮಾರಾಟ ಮಾಡಲು ಮುಂದಾಗಿದ್ದ ಸ್ಕ್ವಾರ್ಪಿಯೋ ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವುದಾಗಿ ಹೋದಾದ ಮರಳಿ ಬಾರದೇ ನಾಪತ್ತೆಯಾಗಿದ್ದ.

ಗಂಟೆಗಳ ಕಾಲ ಕಾದರೂ ವಾಪಾಸ್‌ ಬರದಿದ್ದಾಗ ಆತಂಕಗೊಂಡ ಅಭಿಷೇಕ್‌ ಅವರು ಸುನೀಲ್ ಮೊಬೈಲ್‌ ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದೆ. ಬಳಿಕ ವೈಟ್‌ ಫೀಲ್ಡ್‌ ಪೊಲೀಸರಿಗೆ ದೂರುನೀಡಲಾಗಿತ್ತು.

ದೂರಿನನ್ವಯ ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು ಮಂಗಳವಾರ ಸಂಜೆ ಸರ್ಜಾಪುರದ ವಿದ್ಯಾನಗರ ಬಳಿ ಸುನೀಲ್‌ ನನ್ನು ಕಾರು ಸಮೇತ ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com