ಕೆಲಸ ಸಿಗದಕ್ಕೆ ಜಿಗುಪ್ಸೆಗೊಂಡು ಕಟ್ಟಡದಿಂದ ಜಿಗಿದು ಬಿಕಾಂ ಪದವೀಧರ ಆತ್ಮಹತ್ಯೆ

ಕೆಲಸ ಸಿಗದಕ್ಕೆ ಜಿಗುಪ್ಸೆಗೊಂಡು ಬಿಕಾಂ ಪದವೀಧರ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಆತ್ಮಹತ್ಯೆ
ಆತ್ಮಹತ್ಯೆ

ಬೆಂಗಳೂರು: ಕೆಲಸ ಸಿಗದಕ್ಕೆ ಜಿಗುಪ್ಸೆಗೊಂಡು ಬಿಕಾಂ ಪದವೀಧರ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಹುಳಿಮಾವು ಸಮೀಪದ ಚಾಮುಂಡೇಶ್ವರಿ ಲೇಜೌಟ್ ನಲ್ಲಿ ವಾಸವಿದ್ದ ಶಿಕ್ಷಕಿ ಸುಧಾಮಣಿ ಹಾಗೂ ನಾಗೇಶ್ ದಂಪತಿ ಪುತ್ರ 22 ವರ್ಷದ ಮೋಹನ್ ಸಾಗರ್ ಆತ್ಮಹತ್ಯೆಗೆ ಶರಣಾದ ದುದೈರ್ವಿ.

ಮೋಹನ್ ಸಾಗರ್ ತನ್ನ ಮನೆಯ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಕಟ್ಟದ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ ಅಷ್ಟರಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾನೆ.

ಇತ್ತೀಚೆಗೆ ಬಿಕಾಂ ವ್ಯಾಸಂಗ ಮುಗಿಸಿದ್ದ ಮೋಹನ್ ಪದವಿ ಬಳಿಕ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಯತ್ನಿಸಿದ್ದ. ಹಾಗೆ ಈ ಸಂಬಂಧ ಕೆಲ ಕಂಪನಿಗಳಲ್ಲಿ ಆತ ಸಂದರ್ಶನಕ್ಕೂ ಹಾಜರಾಗಿದ್ದ ಆದರೆ ಎಲ್ಲೂ ಕೆಲಸ ಸಿಗದ ಹಿನ್ನೆಲೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com