ಮಂಗಳೂರು: ಉಲ್ಲಾಳದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಉಲ್ಲಾಳದ ಮೊಗವೀರಪಟ್ಟಣದ ರಾಹುಲ್ ಪೂಜಾರಿ, ಎಲ್ಯಾರ್ ಪಡವು ನಿವಾಸಿ ಪ್ರಜ್ವಲ್ ಅಲಿಯಾಸ್ ಹೇಮಚಂದ್ರ ಹಾಗೂ ತೋಕ್ಕೊಟುವಿನ ಕಪಿಕಡ್ ಗ್ರಾಮದ ವಿನೀತ್ ಬಂಧಿತ ಆರೋಪಿಗಳು. ಏಪ್ರಿಲ್ 26 ರಂದು ಈ ಮೂವರು ಆರೋಪಿಗಳು ಸಫ್ವಾನ್ ಹಸನ್ ಮತ್ತು ಸಲೀಮ್ ಮತ್ತು ನಿಜಾಮ್ ಎಂಬುವರ ಮೇಲೆ ದಾಳಿ ನಡೆಸಿದ್ದರು.
ಸಲೀಂ ಮತ್ತು ನಿಜಾಂ ದಾಳಿಯಿಂದ ಪಾರಾಗಿದ್ದರು. ಆದರೆ ಸಫ್ವಾನ್ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿ ಏಪ್ರಿಲ್ 28 ರಂದು ಸಾವನ್ನಪ್ಪಿದ್ದನು. ರಾಹುಲ್ ಪೂಜಾರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಉಲ್ಲಾಳದಲ್ಲಿ ನಿಷೇದಾಜ್ಞೆ ಮುಂದುವರಿಸಲಾಗಿದೆ.
Advertisement