ಬೆಂಗಳೂರು: ಸೆಲ್ಫಿ ತೆಗೆಯಲು ಹೋಗಿ ಕಲ್ಯಾಣಿಗೆ ಬಿದ್ದು 2 ವಿದ್ಯಾರ್ಥಿಗಳು ಸಾವು

ಬನ್ನೇರುಘಟ್ಟದ ಸುವರ್ಣಮುಖಿ ಕಲ್ಯಾಣಿಗೆ ಬಂದಿದ್ದ 14 ವಿದ್ಯಾರ್ಥಿಗಳ ಪೈಕಿ ಇಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ಆಯಾ ತಪ್ಪಿ ಕಲ್ಯಾಣಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ...
ಜಲಸಮಾಧಿ
ಜಲಸಮಾಧಿ

ಬೆಂಗಳೂರು: ಬನ್ನೇರುಘಟ್ಟದ ಸುವರ್ಣಮುಖಿ ಕಲ್ಯಾಣಿಗೆ ಬಂದಿದ್ದ 14 ವಿದ್ಯಾರ್ಥಿಗಳ ಪೈಕಿ ಇಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ಆಯಾ ತಪ್ಪಿ ಕಲ್ಯಾಣಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆಸಿದೆ.

ಯಲಚೇನಹಳ್ಳಿಯ 17 ವರ್ಷದ ಪ್ರಶಾಂತ್ ಹಾಗೂ ಜೀವನ್ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ದ್ವಿತೀಯ ಪಿಎಂಸಿಎಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವಿದ್ಯಾರ್ಥಿಗಳು ತರಗತಿಗೆ ಗೈರಾಗಿ ಸುವರ್ಣಮುಖಿಗೆ ಬಂದಿದ್ದರು.

ಸುವರ್ಣಮುಖಿ ಕಲ್ಯಾಣ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಪ್ರಶಾಂತ್ ಹಾಗೂ ಜೀವನ್ ಆಯಾ ತಪ್ಪಿ ಕಲ್ಯಾಣಿಗೆ ಬಿದ್ದು ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com