ಹುತಾತ್ಮ ಮೇಜರ್ ಅಕ್ಷಯ್ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮನ

ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲು ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರು ಪಾರ್ಥೀವ ಶರೀರವನ್ನು ಗುರುವಾರ ನಗರಕ್ಕೆ ಕರೆತರಲಾಗಿದೆ...
ಬೆಂಗಳೂರಿಗೆ ಬಂದಿಳಿದ ಹುತಾತ್ಮ ಮೇಜರ್ ಅಕ್ಷಯ್ ಪಾರ್ಥೀವ ಶರೀರ
ಬೆಂಗಳೂರಿಗೆ ಬಂದಿಳಿದ ಹುತಾತ್ಮ ಮೇಜರ್ ಅಕ್ಷಯ್ ಪಾರ್ಥೀವ ಶರೀರ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಗುರುವಾರ ನಗರಕ್ಕೆ ಕರೆತರಲಾಗಿದೆ.

ಅಕ್ಷಯ್ ಅವರ ಪಾರ್ಥೀವ ಶರೀರವನ್ನು ಯಲಹಂಕದ ವಾಯುನೆಲೆಗೆ ಈಗಾಗಲೇ ಕರೆತಲಾಗಿದ್ದು, ಇಂದು ಮಧ್ಯಾಹ್ನ 12.30ಕ್ಕೆ ಯಲಹಂಕದಲ್ಲಿರುವ ಅವರ ನಿವಾಸಕ್ಕೆ ಪಾರ್ಥೀರ ಶರೀರವನ್ನು ರವಾನೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಯಲಹಂಕದ ವಾಯುನೆಲೆಯಲ್ಲಿ ಮೇಜರ್ ಅಕ್ಷಯ್ ಕುಮಾರ್ ಅವರಿಗೆ ವಾಯುಸೇನೆ ಅಂತಿಮ ಗೌರವವನ್ನು ಸಲ್ಲಿಸಿದ್ದು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾದಹಳ್ಳಿ ಬಳಿಯ ಅವರ ಅಪಾರ್ಟ್ ಮೆಂಟ್ ಬಳಿ ಕುಟುಂಬ ಸದಸ್ಯರಿಗೆ ಅಂತಿಮ ನಮನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಸಂಜೆ 4.30ರ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com