ಮಂಗಳೂರು: ಚಲಿಸುತ್ತಿದ್ದ ಬಸ್ ನಿಂದ ನದಿಗೆ ಹಾರಿದ ಕಂಡಕ್ಟರ್ ಶವ ಇನ್ನೂ ಪತ್ತೆಯಿಲ್ಲ

ಚಿಲ್ಲರೆ ಹಣಕ್ಕಾಗಿ ಮಹಿಳೆಯೊಂದಿಗೆ ಜಗಳವಾಡಿ ನಂತರ ಚಲಿಸುತ್ತಿದ್ದ ಬಸ್ ನಿಂದ ಕುಮಾರಾಧಾರ ನದಿಗೆ ಹಾರಿದ ಕಂಡಕ್ಟರ್ ನನ್ನು ಪತ್ತೆ ಹಚ್ಚುವಲ್ಲಿ ರಕ್ಷಣಾ ...
ಶವ ಪತ್ತೆ ಹಚ್ಚಲು ತೆರಳಿದ್ದ ರಕ್ಷಣಾ ತಂಡ
ಶವ ಪತ್ತೆ ಹಚ್ಚಲು ತೆರಳಿದ್ದ ರಕ್ಷಣಾ ತಂಡ

ಮಂಗಳೂರು: ಚಿಲ್ಲರೆ ಹಣಕ್ಕಾಗಿ ಮಹಿಳೆಯೊಂದಿಗೆ ಜಗಳವಾಡಿ ನಂತರ ಚಲಿಸುತ್ತಿದ್ದ ಬಸ್ ನಿಂದ ಕುಮಾರಾಧಾರ ನದಿಗೆ ಹಾರಿದ ಕಂಡಕ್ಟರ್ ನನ್ನು ಪತ್ತೆ ಹಚ್ಚುವಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯರು ವಿಫಲರಾಗಿದ್ದಾರೆ.

ನಿರ್ವಾಹಕ ದೇವದಾಸ್ ಶೆಟ್ಟಿ ಶವ ಭಾನುವಾರ ನದಿಯ ಮೇಲೆ ತೇಲುತ್ತಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು 15 ಸ್ಥಳೀಯ ಈಜುಗಾರರ ತಂಡ ಭಾನುವಾರದ ವರೆಗೂ ದೇವದಾಸ್ ಶೆಟ್ಟಿ ಪತ್ತೆ ಹಚ್ತಲು ಕಾರ್ಯಾಚರಣೆ ನಡೆಸಿತು. ಆದರೆ ಭಾರೀ ಮಳೆಯ ಕಾರಣ ನದಿ ಉಕ್ಕಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ.

ಈ ನಡುವೆ  ದೇವದಾಸ್ ಶೆಟ್ಟಿ ಅವರ ಕುಟುಂಬಸ್ಥರು ಪ್ರಕರಣದ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಚಿಲ್ಲರೆ ವಿಷಯ ಸಂಬಂಧ ದೇವದಾಸ್ ಶೆಟ್ಟಿ ಅವರು ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಯಂತ ನಿರ್ಘಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com