ಪ್ರಕರಣದಿಂದ ತೀವ್ರವಾಗಿ ಮನನೊಂದಿದ್ದ 47 ವರ್ಷದ ದೇವದಾಸ್ ಅವರು ಚಲಿಸುತ್ತಿದ್ದ ಬಸ್ ನಿಂದ ಭಾನುವಾರ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೇವದಾಸ್ ಅವರ ಮೃತದೇಹ ಪತ್ತೆಗಾಗಿ ಪುತ್ತೂರಿನ ಅಗ್ನಿಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರ ನದಿಯಲ್ಲಿ ಶೋಧ ಕಾರ್ಯ ನಡೆಸಿತ್ತು. ಕಳೆದ ಮೂರು ದಿನಗಳಿಂದ ತೀವ್ರ ಶೋಧ ನಡೆಸಿದ ಬಳಿಕ ಇದೀಗ ದೇವದಾಸ್ ಅವರ ಮೃತದೇಹ ಪತ್ತೆಯಾಗಿದೆ.