ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಐಐಐಟಿ-ಬಿ ಕ್ಯಾಂಪಸ್ ನಲ್ಲಿ ಎಂಟೆಕ್ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಇಂಟರ್ ನ್ಯಾಷನಲ್ ಇಸ್ಸಿಟ್ಯೂಟ್ ಆಫ್ ಇನ್ ಫಾರ್ಮೆಷನ್ ಟೆಕ್ನಾಲಜಿ(ಐಐಐಟಿ) ಕಾಲೇಜು ಆವರಣದಲ್ಲಿನ ಹಾಸ್ಟೆಲ್ ಕಟ್ಟಡದಿಂದ ಜಿಗಿದು...
ಆತ್ಮಹತ್ಯೆ
ಆತ್ಮಹತ್ಯೆ
ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಇಂಟರ್ ನ್ಯಾಷನಲ್ ಇಸ್ಸಿಟ್ಯೂಟ್ ಆಫ್ ಇನ್ ಫಾರ್ಮೆಷನ್ ಟೆಕ್ನಾಲಜಿ(ಐಐಐಟಿ) ಕಾಲೇಜು ಆವರಣದಲ್ಲಿನ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಎಂಟೆಕ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 
ಐಐಐಟಿಯಲ್ಲಿ ಎಂಟೆಕ್ ಓದುತ್ತಿದ್ದ ಹೈದರಾಬಾದ್ ಮೂಲದ 21 ವರ್ಷದ ಸಾಯಿಶರತ್ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಶರತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಡೆಟ್ ನೋಟ್ ಬರೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 
ಸ್ನೇಹಿತ ರಾಹುಲ್ ಎಂಬಾತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ರಾತ್ರಿ ಗುರುವಾರ ರಾತ್ರಿ 10 ಗಂಟೆಗೆ ಹಾಸ್ಟೆಲ್ ಗೆ ವಾಪಸಾಗಿದ್ದ ಸಾಯಿಶರತ್ ಶುಕ್ರವಾರ ಬೆಳಗ್ಗೆ 4.30ರ ಸುಮಾರಿಗೆ ಕಟ್ಟಡದ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿದ್ದಾನೆ. 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶರತ್ ಮೃತಪಟ್ಟಿದ್ದಾನೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ತಿಳಿಸಿದ್ದಾರೆ.
ಸಂದೇಶ, ಕಾಲ್ ರೆಕಾರ್ಡ್ ಡಿಲೀಟ್ ಮಾಡಿರುವ ಶರತ್
ಮೃತ ವಿದ್ಯಾರ್ಥಿ ಸಾಯಿ ಶರತ್ ಆತ್ಮಹತ್ಯೆಗೂ ಮುನ್ನ ಫೋನ್ ಕರೆ ಮತ್ತು ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದಾನೆ. ಹೀಗಾಗಿ ನಾವು ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳನ್ನು ಕಲೆ ಹಾಕುತ್ತಿರುವುದಾಗಿ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com