ಅಗ್ಗದ ದರದಲ್ಲಿ ರಾಜ್ಯದ ಜನತೆಗೆ ಉಪಾಹಾರ, ಊಟ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಬಜೆಟ್ ನಲ್ಲಿ ಕ್ಯಾಂಟಿನ್ ಯೋಜನೆಯನ್ನು ಘೋಷಿಸಿದ್ದರು. ಅಂತೆ ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ಗಳನ್ನು ನಿರ್ಮಿಸಲು ನಿರ್ಧರಿಸಿದ್ದು ಸದ್ಯ 87 ಕ್ಯಾಂಟಿನ್ ಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬಿಬಿಎಂಪಿ ಮಾತ್ರ 101 ಕ್ಯಾಂಟಿನ್ ಗಳ ಲೋಕಾರ್ಪಣೆ ಮಾಡುವುದಾಗಿ ಹೇಳುತ್ತಿದೆ.