ಬೆಂಗಳೂರು: ಮಹಿಳೆಯ ಕೊಳೆತ ಮೃತದೇಹ ಪತ್ತೆ

ಯಶವಂತಪುರದ ಬಿ.ಕೆ.ನಗರದ ಬಾಡಿಗೆ ಮನೆಯೊಂದರಲ್ಲಿ 32 ವರ್ಷ ಮಹಿಳೆಯ ಕೊಳೆತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಯಶವಂತಪುರದ ಬಿ.ಕೆ.ನಗರದ ಬಾಡಿಗೆ ಮನೆಯೊಂದರಲ್ಲಿ 32 ವರ್ಷ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ.
ಆಂಧ್ರ ಪ್ರದೇಶದ ಹಿಂದೂಪುರ ಜಿಲ್ಲೆಯ ಅನಿತಾಳನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಫಾಸ್ಟ್ ಫುಡ್ ಹೊಟೇಲೊಂದರಲ್ಲಿ ಅನಿತಾ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿದ್ದರು. ಅನಿತಾಳ ಪತಿ ತೀರಿಕೊಂಡ ನಂತರ, ಹೊಟೇಲ್ ಮಾಲಿಕ ಮಂಜುನಾಥ್ ಅನಿತಾಳನ್ನು ಹಿಂದೂಪುರದಿಂದ ಕರೆತಂದಿದ್ದರು.
ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅನಿತಾ ತನ್ನ ಮಗನೊಂದಿಗೆ ಮತ್ತಿಕೆರೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ಮನೆಗೆ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ನಿನ್ನೆ ಅನಿತಾಳ ಮನೆಯ ಸುತ್ತಮುತ್ತಲಿನವರು ವಾಸನೆ ಬರುತ್ತಿದೆಯೆಂದು ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಅನಿತಾ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. 
ಹೊಟೇಲ್ ಮಾಲಿಕ ಮಂಜುನಾಥ್ ಈ ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದಾನೆ. ಅನಿತಾಳ ಪುತ್ರ ಬೆಂಗಳೂರಿನಲ್ಲಿ ಡಿಪ್ಲೊಮಾ ಓದುತ್ತಿದ್ದು, ಘಟನೆ ಸಂದರ್ಭದಲ್ಲಿ ಊರಿಗೆ ಹೋಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com