ಕಳೆದ ಭಾನುವಾರ ರಾತ್ರಿ 10.30ರ ಸುಮಾರಿಗೆ ಇಂದಿರಾನಗರದಿಂದ ಬಿಟಿಎಂ ಲೇ ಔಟ್ ಗೆ ಒಲಾ ಕ್ಯಾಬ್ ಬುಕ್ ಮಾಡಿ ಯುವತಿ ಪ್ರಯಾಣಿಸುತ್ತಿದ್ದರು. ಕಾರಿನ ಚಾಲಕ ರಾಜಶೇಖರ ರೆಡ್ಡಿ ಕೋರಮಂಗಲಕ್ಕೆ ಹೋಗಲು ಇಂಟರ್ ಮೀಡಿಯೆಟ್ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿದ. ಕೈಚಾಚಿ ಹಿಂದೆ ಕುಳಿತಿದ್ದ ಯುವತಿಯ ದೇಹ ಸ್ಪರ್ಶಿಸಲಾರಂಭಿಸಿದ. ಆ ಸಂದರ್ಭದಲ್ಲಿ ಸುತ್ತಮುತ್ತ ಯಾವುದೇ ವಾಹನ ಹೋಗುತ್ತಿರಲಿಲ್ಲ.