ಹವಳ ಮಾತಾಡ್ತಂತೆ: ಗಂಡ ಸಾಯ್ತಾರೆಂದು ತಾಳಿ ತೆಗೆದು ಹವಳ ಒಡೆದ ಮಹಿಳೆಯರು!

ಮಾಂಗಲ್ಯ ಸರಕ್ಕೆ ಹಾಕಿದ್ದ ಹವಳ ಮಾತನಾಡಿತು...ತಾಳಿಯಲ್ಲಿರುವ ಹವಳ ತೆಗೆಯದಿದ್ದರೆ ಗಂಡನ ಸಾವು ಖಚಿತ ಎಂಬ ವದಂತಿಗಳು ಹಲವೆಡೆ ಹರಡಿದ್ದು. ಗಾಬರಿಗೊಂಡಿರುವ ಮಹಿಳೆಯರು ತಾಳಿ ತೆಗೆದು ಅದರಲ್ಲಿರುವ ಕೆಂಪು ಹವಳಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬಳ್ಳಾರಿ: ಮಾಂಗಲ್ಯ ಸರಕ್ಕೆ ಹಾಕಿದ್ದ ಹವಳ ಮಾತನಾಡಿತು...ತಾಳಿಯಲ್ಲಿರುವ ಹವಳ ತೆಗೆಯದಿದ್ದರೆ ಗಂಡನ ಸಾವು ಖಚಿತ ಎಂಬ ವದಂತಿಗಳು ಹಲವೆಡೆ ಹರಡಿದ್ದು. ಗಾಬರಿಗೊಂಡಿರುವ ಮಹಿಳೆಯರು ತಾಳಿ ತೆಗೆದು ಅದರಲ್ಲಿರುವ ಕೆಂಪು ಹವಳಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ನಡೆದಿದೆ. 
ತಾಳಿಯಲ್ಲಿರುವ ಕೆಂಪು ಹವಳಕ್ಕೆ ಜೀವ ಬರುತ್ತದೆ. ಅದು ಮಾತನಾಡಿದರೆ ಪತಿ ಸಾವಿಗೀಡಾಗುತ್ತಾನೆಂಬ ವದಂತಿ ಬಳ್ಳಾರಿ, ದಾವಣಗೆರೆ, ಕೊಪ್ಪಳ ಜಿಲ್ಲೆ ಸೇರಿದಂತೆ ಹಲವೆಡೆ ಹರಡಿದೆ. 
ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಗಾಳಿ ಸುದ್ದಿ ಹರಡಿದ್ದು, ಮಹಿಳೆಯರು ಆತಂಕ್ಕೊಳಗಾಗಿದ್ದಾರೆ. ಪತಿಯ ಜೀವಕ್ಕೆ ಕುತ್ತು ಬರುತ್ತದೆ ಎಂದು ಹೆದರಿದ ಗೃಹಿಣಿಯರು ತಾಳಿಯ ಜೊತೆಗಿದ್ದ ಹವಳಗಳನ್ನು ಒಡೆದು ಪುಡಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com